ಯಲ್ಲಾಪುರ: ಮಾನವನ ಬದುಕನ್ನು ರೂಪಿಸಲು ಶ್ರೇಷ್ಠವಾದ ಭಗವದ್ಗೀತೆಯನ್ನು ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅದನ್ನು ನಿತ್ಯವೂ ಪಠಿಸಿ, ಅಧ್ಯಯನ ಮಾಡುವುದರಿಂದ ನಮ್ಮ ಸಕಲ ಸಮಸ್ಯೆಗಳಿಗೂ ಪರಿಹಾರ ದೊರಕಿ, ಮೌಲಿಕ ಜೀವನ ನಡೆಸಲು ಪೂರಕ ನೆರವಾಗುತ್ತದೆ ಎಂದು ತಹಸೀಲ್ದಾರ ಅಶೋಕ ಭಟ್ಟ ಹೇಳಿದರು.
ಉಪ ತಹಸೀಲ್ದಾರ್ ಗೀತಾ ಜಾಧವ್ ಗೀತಾ ಜಯಂತಿ ಕುರಿತು ಉಪನ್ಯಾಸ ನೀಡಿ, ಕೃಷ್ಣನ ಕುರಿತು ಎಷ್ಟು ಮಾನಾಡಿದರೂ ಕಡಿಮೆಯೇ. ಭಗವಂತ ಹೇಳಿದಂತೆ "ಈ ಸಮಯ ಕಳೆದು ಹೋಗುತ್ತದೆ " ಎಂಬ ವಾಕ್ಯ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ವಾಸ್ತವಿಕವಾದುದಾಗಿದೆ. ಅದರಲ್ಲೂ ನಮ್ಮ ಕಂದಾಯ ಇಲಾಖೆಯಲ್ಲಿ ಸದಾ ನಮಗೆ ಮಾದರಿಯಾಗಿದೆ ಎಂದು ಕೃಷ್ಣನ ಅವತಾರದ ವಿವಿಧ ಸನ್ನಿವೇಶಗಳ ಚಿತ್ರಣವನ್ನು ನೀಡಿದರು. ಕಾರ್ಯಕ್ರಮದ ನಿಮಿತ್ತ ಆರಾಧ್ಯಾ ಶೇಟ್ ಶ್ರೀಕೃಷ್ಣನ ವೇಷ ಧರಿಸಿ, ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಗ್ರೇಡ್-೨ ತಹಸೀಲ್ದಾರ್ ಸಿ.ಜಿ. ನಾಯ್ಕ ಸ್ವಾಗತಿಸಿದರು. ಸಹಾಯಕ ಲೆಕ್ಕಾಧಿಕಾರಿ ಶ್ರೀಧರ ಮಡಿವಾಳ ನಿರ್ವಹಿಸಿ, ವಂದಿಸಿದರು. ಪಿಎಸ್ಐ ಸಿದ್ದು ಗುಡಿ, ಪಪಂ ಮುಖ್ಯಾಧಿಕಾರಿ ಸುನಿಲ ಗಾವಡೆ, ಮೋಜಣಿ ಇಲಾಖೆಯ ವನಿತಾ ಪಾಟೀಲ, ಸಿಡಿಪಿಒ ಇಲಾಖೆಯ ವೀರವ್ವ ಪೂಜಾರ್, ಹಿಂದುಳಿದ ಇಲಾಖೆಯ ದಾಕ್ಷಾಯಿಣಿ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ ಉಪಸ್ಥಿತರಿದ್ದರು.