ಬೀದರ್‌ಗೆ ರಾಷ್ಟ್ರ ಮಟ್ಟದಲ್ಲಿ ‘ಅತ್ಯುತ್ತಮ ಜಿಲ್ಲೆ’ ಪ್ರಶಸ್ತಿ

Published : Nov 19, 2025, 09:09 AM IST
Bidar Municipal Corporation

ಸಾರಾಂಶ

ಬೀದರ್ ಜಿಲ್ಲಾ ಪಂಚಾಯತ್‌ಗೆ ರಾಷ್ಟ್ರೀಯ ಜಲ ಸಂಚಯ-ಜನ್ ಭಾಗಿದಾರಿ ಪ್ರಶಸ್ತಿ ದೊರೆತಿದೆ. ‘ಅತ್ಯುತ್ತಮ ಪ್ರದರ್ಶನ ಜಿಲ್ಲೆ’ ಎಂಬ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೀದರ್‌ ಜಿಲ್ಲೆಯೂ ರಾಜ್ಯಕ್ಕೆ ಹೆಮ್ಮೆ ತಂದಿದೆ.

  ಬೀದರ್ :  ಬೀದರ್ ಜಿಲ್ಲಾ ಪಂಚಾಯತ್‌ಗೆ ರಾಷ್ಟ್ರೀಯ ಜಲ ಸಂಚಯ-ಜನ್ ಭಾಗಿದಾರಿ ಪ್ರಶಸ್ತಿ ದೊರೆತಿದೆ. ‘ಅತ್ಯುತ್ತಮ ಪ್ರದರ್ಶನ ಜಿಲ್ಲೆ’ ಎಂಬ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೀದರ್‌ ಜಿಲ್ಲೆಯೂ ರಾಜ್ಯಕ್ಕೆ ಹೆಮ್ಮೆ ತಂದಿದೆ.

ಇಡೀ ರಾಷ್ಟ್ರದಲ್ಲಿಯೇ ಬೀದರ್‌ಗೆ 6ನೇ ಸ್ಥಾನ

ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಇಡೀ ರಾಷ್ಟ್ರದಲ್ಲಿಯೇ ಬೀದರ್‌ಗೆ 6ನೇ ಸ್ಥಾನ ದೊರೆಯಿತು. ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. 

ಪ್ರಶಸ್ತಿ ಪ್ರದಾನ

ಬೀದರ್ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತಿತರರು ಇದ್ದರು. 

PREV
Read more Articles on

Recommended Stories

ಸಿದ್ದೇಶ್ವರ ದೇವಳ ಕಳಸಾರೋಹಣ ಸಂಪನ್ನ
ಜಗತ್ತಿನ ಸೂಕ್ಷ್ಮ ಗೃಹಿಕೆಗೆ ಸಾಹಿತ್ಯ ಕೃತಿಗಳು ಅಗತ್ಯ: ಪ್ರೊ ಬಿ.ಎಸ್.ಬಿರಾದಾರ