ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುಮಠಕಲ್ ಮಂಡಲದಿಂದ ನಡೆದ ‘ಗ್ರಾಮ ಚಲೋ’ ಅಭಿಯಾನದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ವಿಭಾಗ ಸಂಚಾಲಕ ಅಶೋಕ್ ಬಾಗ್ಲಿ, ಗುರುಮಠಕಲ್ ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಅನೇಕರು ಪಾಲ್ಗೊಂಡಿದ್ದರು.ಗ್ರಾಮ ಚಲೋ ಅಭಿಯಾನವು ಫೆಬ್ರವರಿ 9, 10, 11 ಮೂರು ದಿನಗಳ ಕಾಲ ನಡೆಯಲಿದ್ದು, ಪ್ರವಾಸಿ ಕಾರ್ಯಕರ್ತರನ್ನು ಜೋಡಣೆ ಮಾಡಿ ಪ್ರತಿ ಗ್ರಾಮಕ್ಕೆ 24 ತಾಸುಗಳ ಕಾಲ ವಾಸ್ತವ್ಯ ಸಮೇತ ಹೋಗುವ ಉದ್ದೇಶದಿಂದ ಗುರುಮಠಕಲ್ ಮಂಡಲದ ಸಂಚಾಲಕ, ಸಹ-ಸಂಚಾಲಕ ಹಾಗೂ ಪ್ರಮುಖರ ಸಭೆಯನ್ನು ಯಾದಗಿರಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆಸಲಾಯಿತು.
ಬಿಜೆಪಿ ಕಳೆದ 10ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ, ಮನೆಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರ ಮನ ಮನಕ್ಕೆ ಮುಟ್ಟಿಸುವ ಗ್ರಾಮ ಚಲೋ ಅಭಿಯಾನವನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ವಾರ್ಡ್ಗಳಲ್ಲಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ ಹೇಳಿದರು.ಅಭಿಯಾನದ ಕುರಿತು ವಿಭಾಗ ಸಂಚಾಲಕ ಅಶೋಕ್ ಬಾಗ್ಲಿಯವರು ಮಾತನಾಡಿ, ಮನೆ ಮನೆಗೆ ಮೋದಿ ಸರ್ಕಾರದ ಸಾಧನೆಯ ಪ್ರಸಾರ, ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಮಹಾಭಿಯಾನ, ಬೂತ್ ಸಶಕ್ತೀಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವುದು, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸುವುದು, ಮನೆಮನೆಗೆ ಬಿಜೆಪಿ, ಮನಮನಕ್ಕೆ ಮೋದಿ ಎನ್ನುವ ನಿಟ್ಟಿನಲ್ಲಿ ಗ್ರಾಮ ಚಲೋ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸೇರಿ ಕಾರ್ಯೋನ್ಮುಖರಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮಚಲೋ ಅಭಿಯಾನ ಜಿಲ್ಲಾ ಸಹ ಸಂಚಾಲಕರಾದ ಬಾಲಪ್ಪ ಯಲ್ಲಮ್ಮಳ, ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೆಗಜಿ, ಭೀಮು ಮಡಿವಾಳ, ಅಭಿಯಾನ ಸಂಚಾಲಕ ಭೀಮರಾಯ ಶೇಖಶಿಂದಿ, ಸಹ ಸಂಚಾಲಕ ಶರಣು ಹೋನಗೇರಾ, ಮಲ್ಲು ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ಚಂದ್ರಕಲಾ ಮಸಿಮಠ, ಶ್ರೀದೇವಿ ಶೆಟ್ಟಿಹಳ್ಳಿ, ಅಮೃತ ತಿಪಶೇಟ್ಟಿ, ಚೇತನ್, ಮರೀಲಿಂಗ ಜಿನಿಕೇರಿ,ಅಮರೇಶ್ ನಾಯಕ್, ಲಕ್ಷ್ಮಣ ನಾಯಕ್, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.