2,811 ಕೋಟಿ ರು. ಮೊತ್ತದ ಬಿಒಬಿ ಲಾಭಾಂಶ ಚೆಕ್‌ ಕೇಂದ್ರಕ್ಕೆ ಹಸ್ತಾಂತರ

KannadaprabhaNewsNetwork |  
Published : Jul 02, 2026, 03:00 AM IST
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಲಾಭಾಂಶ ಮೊತ್ತದ ಚೆಕ್‌ ಹಸ್ತಾಂತರಿಸುತ್ತಿರುವ ಬಿಒಬಿ ಬ್ಯಾಂಕ್‌ ಎಂಡಿ ಡಾ.ದೇವದತ್ತ ಚಂದ್‌  | Kannada Prabha

ಸಾರಾಂಶ

ಭಾರತದ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ(ಬಿಒಬಿ) 2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ 2025–26ನೇ ಹಣಕಾಸು ವರ್ಷದ 2,811 ಕೋಟಿ ರು. ಲಾಭಾಂಶದ (ಡಿವಿಡೆಂಡ್) ಚೆಕ್ ಅನ್ನು ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿತು.ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೇವದತ್ತ ಚಂದ್ ಅವರು ಲಾಭಾಂಶದ ಚೆಕ್ ಅನ್ನು ಹಣಕಾಸು ಸಚಿವರಿಗೆ ಹಸ್ತಾಂತರಿಸಿದರು.

ಮಂಗಳೂರು: ಭಾರತದ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ(ಬಿಒಬಿ) 2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ 2025–26ನೇ ಹಣಕಾಸು ವರ್ಷದ 2,811 ಕೋಟಿ ರು. ಲಾಭಾಂಶದ (ಡಿವಿಡೆಂಡ್) ಚೆಕ್ ಅನ್ನು ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿತು.ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೇವದತ್ತ ಚಂದ್ ಅವರು ಲಾಭಾಂಶದ ಚೆಕ್ ಅನ್ನು ಹಣಕಾಸು ಸಚಿವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ, ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಲಲಿತ್ ತ್ಯಾಗಿ, ಸಂಜಯ್ ಮುದಲಿಯಾರ್, ಲಾಲ್ ಸಿಂಗ್ ಮತ್ತು ಬೀನಾ ವಹೀದ್ ಇದ್ದರು.ಈ ಲಾಭಾಂಶ ಪಾವತಿಯು ಬ್ಯಾಂಕ್ ಆಫ್ ಬರೋಡಾದ ದೃಢವಾದ ಹಣಕಾಸು ಸಾಧನೆ ಹಾಗೂ ಎಲ್ಲ ಪಾಲುದಾರರಿಗೆ ದೀರ್ಘಕಾಲೀನ ಮೌಲ್ಯವನ್ನು ಸೃಷ್ಟಿಸುವ ಬ್ಯಾಂಕಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 2025–26ನೇ ಹಣಕಾಸು ವರ್ಷಕ್ಕೆ ಬ್ಯಾಂಕ್ ಪ್ರತಿ 2 ರು. ಮುಖಬೆಲೆಯ ಈಕ್ವಿಟಿ ಷೇರಿಗೆ 8.50 ರು. ಲಾಭಾಂಶವನ್ನು ಘೋಷಿಸಿದ್ದು, ಇದು ಮುಖಬೆಲೆಯ ಶೇ. 425ಕ್ಕೆ ಸಮನಾಗಿದೆ.2025–26ನೇ ಹಣಕಾಸು ವರ್ಷ ಬ್ಯಾಂಕ್ ಆಫ್ ಬರೋಡಾಗೆ ಐತಿಹಾಸಿಕ ವರ್ಷವಾಗಿದ್ದು, ಬ್ಯಾಂಕ್ ತನ್ನ ವಾರ್ಷಿಕ ನಿವ್ವಳ ಲಾಭದಲ್ಲಿ ಮೊದಲ ಬಾರಿಗೆ 20,000 ಕೋಟಿ ರು. ಮೈಲಿಗಲ್ಲನ್ನು ದಾಟಿ, 20,021 ಕೋಟಿ ರು. ಸ್ವತಂತ್ರ ನಿವ್ವಳ ಲಾಭವನ್ನು ದಾಖಲಿಸಿದೆ. ಅಲ್ಲದೆ 2026ರ ಮಾರ್ಚ್ 31ರ ವೇಳೆಗೆ ಬ್ಯಾಂಕಿನ ಜಾಗತಿಕ ವ್ಯವಹಾರ 30 ಲಕ್ಷ ಕೋಟಿ ರು. ಮೀರಿದ್ದು, ಬ್ಯಾಂಕಿನ ನಿರಂತರ ಬೆಳವಣಿಗೆ ಮತ್ತು ಬಲಿಷ್ಠ ಹಣಕಾಸು ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಜ ದೇವರ ಕೆಲಸ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌
ಆ್ಯಂಬುಲೆನ್ಸ್ ಸೇವೆಗೆ ಎಸ್.ಆರ್.ಪಾಟೀಲ ಚಾಲನೆ