ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಜಿಟ್ಚನಕಟ್ಟಿ ಗ್ರಾಮದ ಮದ್ದಾನಸ್ವಾಮಿ (22) ಹಾಗೂ ಬಂಡ್ರಿ ಗ್ರಾಮದ ದೀಪಿಕಾ (18) ಪ್ರೇಮಿಗಳು.
ಮದ್ದಾನಸ್ವಾಮಿ ಹರಪನಹಳ್ಳಿಯ ಸಪಪೂ ಕಾಲೇಜಿನಲ್ಲಿ ಎರಡನೇ ಪಿಯು ಓದುತ್ತಿದ್ದು, ಏ.15ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಸಂಜೆಯಾದರೂ ಬರಲಿಲ್ಲದ್ದಕ್ಕೆ ಆತನ ಸ್ನೇಹಿತರಿಗೆ ಪೋನ್ ಮಾಡಿ ಕೇಳಿದರೂ ಗೊತ್ತಾಗಿಲ್ಲ, ಆತನ ಪೋನ್ ಸ್ವಿಚ್ ಆಫ್ ಆಗಿತ್ತು.16 ರಂದು ಬಂಡ್ರಿಯ ದೀಪಿಕಾಳ ಕಡೆಯ 4-5 ಜನರು ಯುವಕನ ಮನೆಗೆ ಬಂದು ನಿಮ್ಮ ಹುಡುಗ ದೀಪಿಕಾಳನ್ನು ಕರೆದುಕೊಂಡು ಹೋಗಿದ್ದಾನೆ, ಎಲ್ಲಿದ್ದಾನೆ ಎಂದು ಕೇಳಿ ಗಲಾಟೆ ಮಾಡಿ ನಮ್ಮ ಹಿರಿಯ ಪುತ್ರನ ಪೋನ್ ತೆಗೆದುಕೊಂಡು ಹೋಗಿ ನಂತರ ಮರಳಿಸಿದರು. ಹೀಗಿರುವಾಗ ನಿನ್ನೆ ಸಂಜೆ ಹರಪನಹಳ್ಳಿಯ ಅನಂತನಹಳ್ಳಿ ಬಳಿ ಕಾಲೇಜಿನ ಹಿಂಭಾಗ ಹುಡುಗ, ಹುಡುಗಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆ ಹೋಗಿ ನೋಡಿದಾಗ ಶವದ ಮೇಲಿನ ಬಟ್ಟೆಯ ಸಹಾಯದಿಂದ ನೇಣು ಬಿಗಿದು ನೇತಾಡುತ್ತಿರುವ ಶವ ನನ್ನ ಮಗನದೆ ಎಂದು ಆತನ ತಂದೆ ಖಚಿತಪಡಿಸಿದ್ದಾರೆ. ಆತನ ಜೊತೆಗಿರುವ ಇನ್ನೊಂದು ಹೆಣ್ಣು ಶವವು ಆತನು ಇಷ್ಟಪಟ್ಟಿದ್ದ ಬಂಡ್ರಿ ಗ್ರಾಮದ ದೀಪಿಕಾ ಎಂಬುವಳದ್ದು.
ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಇದೇ 15ರಂದು ಫಲಿತಾಂಶ ಪ್ರಕಟವಾದಾಗ ದೀಪಿಕಾ 438 ಅಂಕ ಹಾಗೂ ಮದ್ದಾನಸ್ವಾಮಿ 373 ಅಂಕ ಪಡೆದು ಇಬ್ಬರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.