ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಉಡುಪಿಯ ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿಎಎಸಿ)ವು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಸಂಘದ ಸ್ವಯಂಸೇವಕ ಪ್ರತಿನಿಧಿಗಳಾದ ಭಾರ್ಗವ, ದೀಪ್ತಿ ಮತ್ತು ನೇಹಾ ಅವರು ವಿವಿಧ ದೂರದರ್ಶಕ ಉಪಕರಣವನ್ನು ಜೋಡಿಸಿ ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳನ್ನು ತೋರಿಸಿ ಅವುಗಳ ಬಗ್ಗೆ ವೀಕ್ಷಕ ವಿವರಣೆಯನ್ನು ನೀಡಿದರು.ಮಣಿಪಾಲ ಎಂಐಟಿಯ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ವ್ಯಾಸ ಉಪಾಧ್ಯಾಯ, ಖಗೋಳ ವೀಕ್ಷಣೆಯ ಮಹತ್ವವನ್ನು ತಿಳಿಸಿದರು. ಪಿಎಎಸಿ ಉಸ್ತುವಾರಿ ಡಾ. ಬಿ. ಲಕ್ಷ್ಮೀಶ ರಾವ್, ವಿದ್ಯಾರ್ಥಿಗಳಿಗೆ ಖಗೋಳ ವೀಕ್ಷಣೆಯ ಮಾರ್ಗದರ್ಶನ ಮಾಡಿದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಅಭಿಲಾಷಾ ಹಂದೆ, ಶಾಲೆಯ ಪ್ರಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ರಾತ್ರಿಯ ಆಕಾಶಕಾಯಗಳ ವೀಕ್ಷಣೆಯ ಅನುಭವವು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ತೀವ್ರವಾದ ಕುತೂಹಲವನ್ನು, ಆಸಕ್ತಿಯನ್ನೂ ಹುಟ್ಟುಹಾಕಿತು.