ಲಗ್ನ ಪತ್ರಿಕೆ ಕೋಡಲು ಹೋದಮದುಮಗ ಅಪಘಾತದಲ್ಲಿ ಬಲಿ

KannadaprabhaNewsNetwork |  
Published : Apr 10, 2026, 01:30 AM IST
 ಅಪಘಾತ | Kannada Prabha

ಸಾರಾಂಶ

ತನ್ನ ಮದುವೆ ಆಹ್ವಾನ ಪತ್ರಿಕೆ ಹಂಚಿಕೆಗೆ ತೆರಳಿದ್ದಾಗ ದೇವರ ಉತ್ಸವ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಮದು ಮಗನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹುಳಿಮಾವು ಸಮೀಪ ಗುರುವಾರ ನಸುಕಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಮದುವೆ ಆಹ್ವಾನ ಪತ್ರಿಕೆ ಹಂಚಿಕೆಗೆ ತೆರಳಿದ್ದಾಗ ದೇವರ ಉತ್ಸವ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಮದು ಮಗನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹುಳಿಮಾವು ಸಮೀಪ ಗುರುವಾರ ನಸುಕಿನಲ್ಲಿ ನಡೆದಿದೆ.

ಬನಶಂಕರಿ ನಿವಾಸಿ ಪಿ.ಅಕ್ಷತ್‌ (28) ಮೃತ ದುರ್ದೈವಿ. ಹುಳಿಮಾವು ಬಳಿ ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಅಕ್ಷತ್ ಅವರ ಕುಟುಂಬ ಪೆಟ್ರೋಲ್ ಬಂಕ್ ಹಾಗೂ ಶಿಕ್ಷಣ ಸಂಸ್ಥೆ ಮಾಲಿಕತ್ವ ಹೊಂದಿದ್ದು, ಬನಶಂಕರಿಯಲ್ಲಿ ನೆಲೆಸಿದ್ದಾರೆ. ಏ.29ರಂದು ಅಕ್ಷತ್ ಮದುವೆ ನಿಗದಿಯಾಗಿತ್ತು. ಹೀಗಾಗಿ ಹುಳಿಮಾವು ಸುತ್ತಮುತ್ತ ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ವಿವಾಹ ಆಹ್ವಾನ ಪತ್ರಿಕೆ ವಿತರಿಸಲು ಬುಧವಾರ ಬಂದಿದ್ದರು. ಆಗ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ವಿಷಯ ಗೊತ್ತಾಗಿ ಗುರುವಾರ ದೇವರಿಗೆ ಪೂಜೆ ಸಲ್ಲಿಸಲು ತೆರಳಲು ಗೆಳೆಯನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಅಂತೆಯೇ ನಸುಕಿನ 5.30ರ ಸುಮಾರಿಗೆ ಸ್ನಾನ ಮುಗಿಸಿ ದೇವರ ಉತ್ಸವ ನೋಡಲು ಅಕ್ಷತ್ ತೆರಳಿದ್ದರು. ಆಗ ದೇವರ ಪಲ್ಲಕ್ಕಿ ನೋಡುತ್ತ ರಸ್ತೆ ಬದಿ ನಿಂತಿದ್ದಾಗ ಮೆರವಣಿಗೆಯಲ್ಲಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ಕರೆದೊಯ್ದಿದ್ದಾರೆ. ಆದರೆ ತೀವ್ರ ರಸ್ತಸ್ರಾವದಿಂದ ಅಕ್ಷತ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಝೂಂಬಿ ಡ್ರಗ್ಸ್ ಬಗ್ಗೆ ಸುಳ್ಳು ಸುದ್ದಿಹರಡಿದರೆ ಕ್ರಮ: ಸಿಂಗ್ ಎಚ್ಚರಿಕೆ
ಖಾಸಗಿ ಗೋದಾಮಿಗೆ ಬೆಂಕಿ:ಕೊಟ್ಯಂತರ ರು. ವಸ್ತು ಭಸ್ಮ