ಬಜೆಟ್‌: ಶ್ರೀರಂಗಪಟ್ಟಣ ಪುರಸಭೆಯಲ್ಲಿ ಪೂರ್ವಭಾವಿ ಸಭೆ, ಚರ್ಚೆ

KannadaprabhaNewsNetwork |  
Published : Jan 26, 2026, 02:00 AM IST
24ಕೆಎಂಎನ್ ಡಿ19 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ಪುರಸಭೆಗೆ ಸೇರಿದ ಆಸ್ತಿ, ಅಂಗಡಿ ಮಳಿಗೆ ಸೇರಿದಂತೆ ಇತರೆ ತೆರಿಗೆ ಶುಲ್ಕಗಳಿಂದ ಸುಮಾರು ₹5 ಕೋಟಿಗೂ ಅಧಿಕ ಆದಾಯ ಬರುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇತರೆ ಅನುದಾನಗಳು ₹11 ಕೋಟಿಗೂ ಹೆಚ್ಚು ಸಂಗ್ರಹಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಪುರಸಭೆಯ 2026- 27ನೇ ಸಾಲಿನ ಆಯ- ವ್ಯಯ ಮಂಡನೆ ಕುರಿತು ಕಚೇರಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಎಂ.ರಾಜಣ್ಣ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪುರಸಭೆ ಅಧಿಕಾರಿಗಳು ಪುರಸಭೆ ಆದಾಯ ಹಾಗೂ ವೆಚ್ಚಗಳ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಪುರಸಭೆಗೆ ಸೇರಿದ ಆಸ್ತಿ, ಅಂಗಡಿ ಮಳಿಗೆ ಸೇರಿದಂತೆ ಇತರೆ ತೆರಿಗೆ ಶುಲ್ಕಗಳಿಂದ ಸುಮಾರು ₹5 ಕೋಟಿಗೂ ಅಧಿಕ ಆದಾಯ ಬರುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇತರೆ ಅನುದಾನಗಳು ₹11 ಕೋಟಿಗೂ ಹೆಚ್ಚು ಸಂಗ್ರಹಣವಾಗುತ್ತಿದೆ.

ಈ ಎಲ್ಲಾ ಆದಾಯ ಸೇರಿ ಒಟ್ಟು ₹15 ಕೋಟಿಗೂ ಹೆಚ್ಚು ಆದಾಯ ಪುರಸಭೆಗೆ ಬರುತ್ತಿದೆ. ಇದರಲ್ಲಿ ಕಚೇರಿ ಸಿಬ್ಬಂದಿಯ ವೇತನ ಹಾಗೂ ಪುರಸಭೆ ವ್ಯಾಪ್ತಿಯ ಮೂಲ ಸೌಕರ್ಯಗಳಿಗೆ ತಗುಲುವ ವೆಚ್ಚ ₹10 ಕೋಟಿಗೂ ಮಿಗಿಲಾಗಿದೆ.

ಇನ್ನು ಉಳಿದ ₹5.5 ಕೋಟಿ ಆದಾಯದಲ್ಲಿ ಹೊಸ ಹೊಸ ಯೋಜನೆಗಳಿಗೆ ಬಳಸಿಕೊಳ್ಳಬೇಕಿದೆ. ಪುರಸಭೆ ವ್ಯಾಪ್ತಿಯ ಸಮಸ್ಯೆಗಳು ಹಾಗೂ ಇತರೆ ಹೊಸದಾದ ಯೋಜನೆಗಳ ನಿರ್ವಹಣೆಗೆ ಸಾರ್ವಜನಿಕರು ಸಲಹೆ ಗಳನ್ನು ನೀಡಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ಎಂ.ನಂದೀಶ್ ಮಾತನಾಡಿ, ಈ ಬಾರಿ ₹10 ಲಕ್ಷ ವೆಚ್ಚವನ್ನು ಪುರಸಭೆ ಬಜೆಟ್ ನಲ್ಲಿ ಮೀಸಲಿಟ್ಟು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೂ ಆರೋಗ್ಯ ವಿಮೆ ಸಹ ಸೇರಿಸಬೇಕು. ಮೈಸೂರು- ಬೆಂಗಳೂರು ಹೆದ್ದಾರಿಯ ವೃತ್ತಗಳಿಗೆ ಸಿಗ್ನಲ್ ದೀಪ, ಕೆಇಬಿ, ಶ್ರೀರಂಗನಾಥ ದೇವಾಲಯದ ಬಳಿ ಜಾಗ ಹಾಗೂ ಪುರಸಭೆ ಮುಂಭಾಗದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಹಣ, ಇರುವ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಹಣ ಮೀಸಲಿಡುವಂತೆ ಅವರು ತಿಳಿಸಿದರು.

ಗಂಜಾಂನ ವೃತ್ತದ ಬಳಿ ಸಾರ್ವಜನಿಕರಿಗೆ ಶುದ್ಧ ನೀರಿನ ಘಟಕ ನಿರ್ಮಾಣ, ಸಾರ್ವಜನಿಕ ಆಸ್ಪತ್ರೆ ಬಳಿ ಬಸ್ ತಂಗುದಾಣ ನಿರ್ಮಾಣ, ಪಟ್ಟಣದ ಪಾರ್ಕ್‌ನ ಗಿಡಗಳ ನಿರ್ವಹಣೆ ಸೇರಿದಂತೆ ಹಲವು ಸಲಹೆಗಳನ್ನು ಸಾರ್ವಜನಿಕರು ನೀಡಿದರು. ಸಲಹೆಗಳ ಪಡೆದುಕೊಂಡ ಪುರಸಭೆ ಮುಖ್ಯಾಧಿಕಾರಿಗಳು ಮುಂದೆ ನಡೆಯುವ ಆಯವ್ಯಯ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ