ಮಡಿಕೇರಿ: ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಬುಧವಾರ ಕೆಎಸ್ ಆರ್ ಟಿಸಿ ಬಸ್ ನಿಂದ ಮತ್ತೆ ಹಾನಿಯಾಗಿದ್ದು ವೃತ್ತದ ಸುತ್ತ ನಿರ್ಮಿಸಿರುವ ಕಬ್ಬಿಣದ ಬೇಲಿಯ ಸರಳುಗಳಿಗೆ ಹಾನಿಯಾಗಿದೆ. ಬುಧವಾರ ಮಧ್ಯಾಹ್ನ ಮಡಿಕೇರಿ ಮೂಲಕ ಮಂಗಳೂರು ಹೊರಟಿದ್ದ ಸರ್ಕಾರಿ ಬಸ್ ಬಲಭಾಗ ವೃತ್ತದ ಒಂದು ಭಾಗಕ್ಕೆ ತಾಗಿ ಹಾನಿಯಾಗಿದೆ. ಇತ್ತೀಚೆಗಷ್ಟೇ ಇದೆ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ಹಾನಿಗೀಡಾಗಿದ್ದ ಪರಿಣಾಮ ವೃತ್ತವನ್ನು ದುರಸ್ತಿ ಪಡಿಸಲಾಗಿತ್ತು. ಅಲ್ಲದೆ ವೃತ್ತಕ್ಕೆ ವಾಹನಗಳು ಡಿಕ್ಕಿಯಾಗಬಾರದೆಂಬ ಉದ್ದೇಶದಿಂದ ಕಬ್ಬಿಣದ ತಡೆ ಬೇಲಿಯನ್ನು ನಿರ್ಮಿಸಲಾಗಿತ್ತು. ಆದರೆ ಮತ್ತೆ ಕೆಎಸ್ ಆರ್ ಟಿಸಿ ಬಸ್ ತಡೆ ಬೇಲಿಗೆ ಹಾನಿ ಉಂಟು ಮಾಡಿದೆ.