ಕನ್ನಡಪ್ರಭ ವಾರ್ತೆ ಬೈಂದೂರು
ಈ ಸಂದರ್ಭ ಶಂಕರನಾರಾಯಣ ಗ್ರಾಮದ ನಮಾವಿನಕೊಡ್ಲು ಎಂಬಲ್ಲಿ ಗಾಳಿಮಳೆಗೆ ಅಡಕೆ ತೋಟವನ್ನೇ ಕಳೆದುಕೊಂಡ ಹಿರಿಯ ರೈತರೊಬ್ಬರು ನೋವಿನಿಂದ ಕಣ್ಣೀರು ಹಾಕಿದ್ದು, ಶಾಸಕರು ಅವರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು.
ಕಳೆದ ನಾಲ್ಕೈದು ದಿನಗಳ ಮಳೆಯಿಂದ ಬೈಂದೂರು ತಾಲೂಕಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿದೆ. ಅನೇಕರ ಮನೆಗೆ ನೀರು ನುಗ್ಗಿದೆ, ಕೃಶಿ - ತೋಟಗಳಿಗೆ ಹಾನಿಯಾಗಿದೆ, ರಸ್ತೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಶಾಸಕರು ತಮ್ಮೆಲ್ಲ ಪೂರ್ವನಿಗದಿತ ಖಾಸಗಿ ಸಭೆ/ಕಾರ್ಯಕ್ರಮಗಳನ್ನು ಬದಿಗೊತ್ತಿ ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.ರಸ್ತೆಯನ್ನೇ ಕಾಣದ ಹಾಗೂ ಇದುವರೆಗೂ ಯಾವ ಶಾಸಕರು ಕಾಲು ಹಾಕದ ತಲ್ಲೂರು ಗ್ರಾಮದ ಕೋಟೆ ಬಾಗಿಲು, ಬೈಲ್ಮನೆ ಪ್ರದೇಶದಲ್ಲಿ ಮಳೆಯಿಂದಾದ ಸಮಸ್ಯೆಯನ್ನು ಶಾಸಕರು ಸ್ವತಃ ಅನುಭವಕ್ಕೆ ತಂದುಕೊಂಡರು. ಜನರು ತಮ್ಮ ಸಮಸ್ಯೆಗಳನ್ನು ಮನ ಬಿಚ್ಚಿ ಶಾಸಕರಲ್ಲಿ ತೋಡಿಕೊಂಡಿದ್ದಾರೆ.
ಶಾಸಕರೊಂದಿಗೆ ಪ್ರಮುಖರಾದ ವಂಡ್ಸೆ ದೀಪಕ್ ಶೆಟ್ಟಿ, ಕರಣ್ ಪೂಜಾರಿ, ಲಕ್ಷ್ಮೀರಾಜ್ ತಲ್ಲೂರು ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.