ಸಂಸ್ಥೆ ಕಾರ್ಡ್‌ ದುರುಪಯೋಗಕ್ಕೆ ಅವಕಾಶ ನೀಡದಂತೆ ಕ್ಯಾಂಪ್ಕೋ ವಿನಂತಿ

KannadaprabhaNewsNetwork |  
Published : Sep 07, 2024, 01:39 AM IST
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ  | Kannada Prabha

ಸಾರಾಂಶ

ಲ್ಲರೂ ತುಂಬಾ ಎಚ್ಚರಿಕೆಯಿಂದ ಇದ್ದು ಈ ರೀತಿಯ ಮೋಸದ ಜಾಲಕ್ಕೆ ಬಲಿಯಾಗಬಾರದಾಗಿ ವಿನಂತಿ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಳೆಗಾರರೊಂದಿಗೆ ಒಳ್ಳೆಯ ಸಂಬಂಧ ಇರುವ ಕೆಲವೊಂದು ವ್ಯಾಪಾರಿಗಳು ಅವರ ಕ್ಯಾಂಪ್ಕೊ ಸದಸ್ಯತ್ವದ ಚೀಟಿ ಉಪಯೋಗಿಸಿಕೊಂಡು ರೈತರ ಸೋಗಿನಲ್ಲಿ ನಮ್ಮ ಕ್ಯಾಂಪ್ಕೊ ಶಾಖೆಗಳಿಗೆ ಬಂದು ಅಡಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇಂತಹ ಮೋಸದಲ್ಲಿ ಯಾರೂ ಕೂಡ ಭಾಗಿಯಾಗಬಾರದು ಎಂದು ಕ್ಯಾಂಪ್ಕೋ ಆಡಳಿತ ವಿನಂತಿಸಿದೆ.

ಇತ್ತೀಚೆಗೆ ವ್ಯಾಪಾರಿಯೊಬ್ಬ ರೈತರ ಕಾರ್ಡನ್ನು ದುರುಪಯೋಗಪಡಿಸಿಕೊಂಡು ಬರ್ಮಾ(ಮ್ಯಾನ್ಮಾರ್) ಮೂಲದ ಕಳಪೆ ಗುಣಮಟ್ಟದ ಅಡಕೆಯನ್ನು ಇಲ್ಲಿನ ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಕ್ಯಾಂಪ್ಕೊ ಪುತ್ತೂರು ಶಾಖೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಆದರೆ ನಮ್ಮ ಅಧಿಕಾರಿಯ ದಕ್ಷತೆ ಮತ್ತು ಚಾಕಚಕ್ಯತೆಯಿಂದಾಗಿ ಆತನ ಕಪಟತನ ಬಯಲಾಗಿದೆ.

ಇಂತಹ ಮೋಸದ ವ್ಯಾಪಾರದಲ್ಲಿ ಯಾರೂ ಕೂಡ ಭಾಗಿಯಾಗಬಾರದು. ಅದಕ್ಕಾಗಿ ತಮ್ಮ ಕಾರ್ಡನ್ನು ಯಾರೂ ಕೂಡ ದುರುಪಯೋಗಪಡಿಸಲು ಅನುವು ಮಾಡಿಕೊಡಬಾರದು. ತಾವು ಜಾಗರೂಕರಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಕೆಯ ದರ ಸ್ಥಿರತೆಯ ಮೇಲೆ ಮಾರಣಾಂತಿಕ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲರೂ ತುಂಬಾ ಎಚ್ಚರಿಕೆಯಿಂದ ಇದ್ದು ಈ ರೀತಿಯ ಮೋಸದ ಜಾಲಕ್ಕೆ ಬಲಿಯಾಗಬಾರದಾಗಿ ವಿನಂತಿ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?