ಕನ್ನಡಪ್ರಭ ವಾರ್ತೆ ಮಂಗಳೂರು
ಗುಡಿ ಕೈಗಾರಿಕೆಯಲ್ಲಿ ಒಂದಾಗಿರುವ ಇಂತಹ ಈ ನಾಡಿನ ಮಣ್ಣಿನ ಸ್ಪರ್ಶದ ಘಟಕಗಳು ಈಗಿನ ಕಾಲದಲ್ಲಿ ಮರೆಯಾಗುತ್ತಿದ್ದು, ಆ ಜಾಗವನ್ನು ಪ್ಲಾಸ್ಟಿಕ್, ಅಲ್ಯುಮಿನಿಯಂ ಪಾತ್ರೆಗಳು ಜನರ ಮನೆ ತುಂಬುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕುಲಕಸುಬು ಆಧಾರಿತ ವೃತ್ತಿಗಳಿಗೆ ಬೆಂಬಲ ಹಾಗೂ ಸಹಾಯಹಸ್ತ ನೀಡುತ್ತಿರುವ ಬಗ್ಗೆಯೂ ಬ್ರಿಜೇಶ್ ಚೌಟ ಘಟಕದ ಮಾಲೀಕರ ಗಮನ ಸೆಳೆದರು.
ದೀಪಾವಳಿ ಅಥವಾ ಹಬ್ಬ ಹರಿದಿನಗಳಲ್ಲಿ ಉಪಯೋಗಿಸುವ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲೂ ಇವರದು ಎತ್ತಿದ ಕೈ. ಮಣ್ಣಿನ ಪಾತ್ರೆ ತಯಾರಿ ಘಟಕದ ಸವಾಲುಗಳು, ಕಷ್ಟಗಳ ಹಾಗೂ ಕುಲಾಲ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಬ್ರಿಜೇಶ್ ಚೌಟರು, ಸ್ವತಃ ಮಡಿಕೆ ಮಾಡುವ ಅನುಭವವನ್ನೂ ಪಡೆದುಕೊಂಡರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಮಣ್ಣಿನ ವಸ್ತುಗಳ ಗುಡಿ ಕೈಗಾರಿಕೆ ಬಗ್ಗೆ ಸಿಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ಕ್ಯಾಪ್ಟನ್ ಚೌಟ ಚರ್ಚಿಸಿದರು.