ಮಾನ್ವಿ: ಬಸವ ಜಯಂತಿ ಅಂಗವಾಗಿ ಗ್ರಾಮೀಣ ಭಾಗದ ರೈತರಿಗಾಗಿ ಗಿರಿಕಿ ಬಂಡಿ ಎಳೆಯುವ ಸ್ಪರ್ಧೆಗೆ ತಾಲೂಕಿನ ಬೆಟ್ಟದೂರು ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ರಂಗದಾಳ ಗ್ರಾಮದ ಎತ್ತುಗಳು 1711 ಅಡಿ ದೂರವನ್ನು ಕ್ರಮಿಸಿದ್ದು ಪ್ರಥಮ ಬಹುಮಾನ 21 ತೊಲೆ ಬೆಳ್ಳಿ ಕಡಗವನ್ನು ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ರವರು ಎತ್ತುಗಳ ಮಾಲಿಕ ರೈತ ನಬಿಸಾಬ್ ರವರಿಗೆ ವಿತರಿಸಿದರು.ದ್ವಿತೀಯ ಬಹುಮಾನ 15 ತೊಲೆ ಬೆಳ್ಳಿಯನ್ನು ಬೆಟ್ಟದೂರಿನ ಸಾಹುಕಾರ ರಮೇಶನ ಎತ್ತುಗಳು ಪಡೆದಿದ್ದು ಚಾಮರಸ ಮಾಲಿ ಪಾಟೀಲ್ ವಿತರಿಸಿದರು. ತೃತಿಯ ಬಹುಮಾನ ಪಡೆದ ದದ್ದಲ್ ನರಸಪ್ಪ ಎತ್ತುಗಳಿಗೆ ಬಸವ ಪ್ರಭು, ಶರಣಬಸವ ಪಾಟೀಲ್ ಬೆಟ್ಟದೂರು ಅವರು 11 ತೊಲೆ ಬೆಳ್ಳಿ ಕಡಗವನ್ನು ವಿತರಿಸಿದರು.
ನಾಲ್ಕನೇ ಬಹುಮಾನವನ್ನು ಮುಸ್ಟೂರ್ ಶಿವರಾಜ್ ಎತ್ತುಗಳು ಪಡೆದುಕೊಂಡವು 6 ತೊಲೆ ಬೆಳ್ಳಿ ಕಡಗವನ್ನು ಚನ್ನಬಸವ ಮುನ್ನುಟಿಗಿ ವಿತರಿಸಿದರು. ಐದನೇ ಬಹುಮಾನವನ್ನು ರೇಸ್ ರಮೇಶ್ ಮಾಡಿಗಿರಿಯವರ ಎತ್ತುಗಳು ಪಡೆದುಕೊಂಡವು 4 ತೊಲೆ ಬೆಳ್ಳಿ ಕಡಗವನ್ನು ಎಂ .ಅಮರೇಶ್ ವಿತರಿಸಿದರು.ತಾಲೂಕಿನ ವಿವಿಧ ಗ್ರಾಮಗಳ ಅಂದಾಜು 26 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿದರು.