ಹುಬ್ಬಳ್ಳಿ:
ತಾಲೂಕಿನ ಸುಳ್ಳ ಪಂಚಗೃಹ ಹಿರೇಮಠದಲ್ಲಿ ಜರುಗಿದ ಸೊನ್ನಲಗಿ ಶಿವಯೋಗಿ ಸಿದ್ದರಾಮೇಶ್ವರ ಪುರಾಣ ಮಂಗಳ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಖಾಕಿ, ಕಾವಿ ಮತ್ತು ಖಾದಿ ಹೊತ್ತ ಎಲ್ಲರೂ ಜಾತಿ ಹೆಸರಲ್ಲಿ ಸಮಾಜ ಒಡೆಯದೇ ಆರೋಗ್ಯಕರ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕು ಎಂದರು.
ಧರ್ಮವನ್ನು ಜಾತಿಗೆ ಅಂಟಿಸಬಾರದು. ಜಾತಿ ಹೆಸರಿನಲ್ಲಿ ಕೆಲವರು ಸಮುದಾಯ ಸಂಘಟನೆ ಮಾಡಿ, ಅಖಂಡ ವೀರಶೈವ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಾನವ ಧರ್ಮ ಒಂದೇ ಎಂದು ಧರ್ಮ ಸಂದೇಶ ನೀಡುತ್ತಾ ಬಂದಿರುವ ವೀರಶೈವ ಧರ್ಮ ಅನೇಕರ ತಪ್ಪು ಮಾಹಿತಿ, ಸಂದೇಶಗಳಿಂದ ಕವಲು ದಾರಿಯಲ್ಲಿ ಸಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಶ್ರೀ ಜಗದ್ಗುರುಗಳು ಹೇಳಿದರು.ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಲಿ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಆರೋಪ, ಪ್ರತ್ಯಾರೋಪ ಬಿಟ್ಟು ಮಹದಾಯಿ ಯೋಜನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹೂಲಿ ಸಾಂಬಯ್ಯನಮಠದ ಉಮೇಶ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ದ ಶಿವಾಚಾರ್ಯರು, ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯರು, ತಿರುಮಲಕೊಪ್ಪದ ದಾನಯ್ಯ ದೇವರು ಉಪಸ್ಥಿತರಿದ್ದರು.
ಜನರ ವಿಕಾಸ ನಿರಂತರ ಅಭಿವೃದ್ಧಿ ಮೂಲಕ ಆಗಬೇಕೆ ವಿನಾ ದಿಢೀರ್ ಶ್ರೀಮಂತಿಕೆಯಿಂದ ಅಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಹಲವರಿಗೆ ನೆರವಾಗಿದೆ. ಆದರೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಿದೆ. ಗ್ರಾಮೀಣರ, ಬಡವರ ಬದುಕು ದುಸ್ತರವಾಗಿದೆ. ರಸ್ತೆ, ವಸತಿ, ನೀರಾವರಿ ಸೇರಿ ಎಲ್ಲ ವಲಯದ ಅಭಿವೃದ್ಧಿ ಆಗಬೇಕಿದೆ. ಸರ್ಕಾರ ಗ್ಯಾರಂಟಿ ಯೋಜನೆ ಹಾಗೂ ಗ್ಯಾರಂಟಿ ನಿಯಮಗಳನ್ನು ಮರು ಪರಿಶೀಲಿಸಬೇಕು. ರಾಜ್ಯದ ಬೊಕ್ಕಸ ಅಭಿವೃದ್ಧಿಗೆ ಬಳಕೆ ಮಾಡಬೇಕು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡಬೇಕೆಂದು ಶ್ರೀ ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.