ಚಾರ್ಲಿ 777 ಚಲನಚಿತ್ರದ ಶ್ವಾನ ಉತ್ಸವದ ಕೇಂದ್ರ ಬಿಂದು ।
‘ಚಾರ್ಲಿ 777’ ಎರಡನೇ ಬಾರಿ ಕಾಫಿನಾಡು ಚಿಕ್ಕಮಗಳೂರಿನ ಜನ ಮನ ಗೆದ್ದಿದ್ದು, ಶ್ವಾನ ಪ್ರಿಯರಿಗೆ ಮಂಗಳವಾರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ವಾನ ಉತ್ಸವ ಮೆಚ್ಚಿಗೆ ಪಾತ್ರವಾಯಿತು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಚೈತ್ರೋತ್ಸವದಲ್ಲಿ ಮಂಗಳವಾರ ಶ್ವಾನ ಉತ್ಸವದಲ್ಲಿ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 26 ವಿವಿಧ ತಳಿಯ ಬರೋಬ್ಬರಿ 126 ಶ್ವಾನಗಳ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದವು.ಇದರೊಂದಿಗೆ ಪೊಲೀಸ್ , ಅರಣ್ಯ ಇಲಾಖೆ ಹಾಗೂ ಚಾರ್ಲಿ 777 ಚಲನಚಿತ್ರದಲ್ಲಿ ಭಾವನಾತ್ಮಕ ಪಾತ್ರ ನಿರ್ವಹಿಸಿ ಇಡೀ ನಾಡಿನ ಮೆಚ್ಚಿಗೆ ಪಾತ್ರವಾಗ ಶ್ವಾನ ಉತ್ಸವದ ಕೇಂದ್ರ ಬಿಂದುವಾಗಿತ್ತು.
ಉತ್ಸವದಲ್ಲಿ ಭಾಗವಹಿಸಿದ 26 ತಳಿಯ ಶ್ವಾನಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಭಾಗದ ಬಹುಮಾನ ನೀಡ ಲಾಯಿತು. ಉಳಿದಂತೆ ಎಲ್ಲ ತಳಿಯಲ್ಲಿ ಪ್ರಥಮ ಬಹುಮಾನ ಪಡೆದ ಶ್ವಾನಗಳಿಗೆ ಅಂತಿಮ ಸ್ಪರ್ಧೆ ಸಹ ನಡೆಸಲಾಯಿತು. ಶ್ವಾನ ಉತ್ಸವದೊಂದಿಗೆ ವಿವಿಧ ತಳಿಯ ಜಾನುವಾರು, ಕುರಿ, ಕೋಳಿ, ಹಂದಿ ಪ್ರದರ್ಶನ ಚೈತ್ರೋತ್ಸವಕ್ಕೆ ಮರಗು ತಂದಿತ್ತು.
ಜಿಲ್ಲೆಯಲ್ಲಿ ಅತೀ ಹೆಚ್ಚು ಕೃಷಿಕರು, ರೈತರು, ಬೆಳೆಗಾರರು, ರೈತಕಾರ್ಮಿಕರಿದ್ದು, ಅವರಿಗೆ ಈ ಚೈತ್ರೋತ್ಸವದ ಮೂಲಕ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಈ ವರೆಗೆ 2 ಲಕ್ಷ ಜನ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ. ಕನಿಷ್ಠ 3.50 ಲಕ್ಷ ಜನರು ವೀಕ್ಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.ಜಿಲ್ಲೆಯ ಜನರಿಗೆ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಅತಿ ಹೆಚ್ಚಿನ ಮಾಹಿತಿ ನೀಡಲಾಗುವುದು. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಡಾಗ್ ಶೋ ಮತ್ತು ಪಶುಗಳ ಪ್ರದರ್ಶನದಲ್ಲಿ ಹೊರರಾಜ್ಯಗಳ ಪ್ರಾಣಿಗಳು ಪ್ರದರ್ಶಿಸಲ್ಪಡುತ್ತಿವೆ. ಆಸ್ಟ್ರೇಲಿಯದ ಶ್ವಾನ ಹಾಗೂ ಹಳ್ಳಿಕಾರ್, ಅಮೃತ್ ಮಹಲ್ಕಾವಲ್ ತಳಿಗಳು ನೋಡುಗರ ನಿಬ್ಬೆರಗಾಗಿಸುತ್ತಿವೆ ಎಂದು ಹೇಳಿದರು.ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಡಾ. ಲೋಕೇಶ್, ಡಾ.ನಾಗರಾಜ್, ಮಾದವರಾವ್, ಪ್ರಮೋದ್ ಮೊದಲಾದವರಿದ್ದರು.
ಮುಗಿಬಿದ್ದ ಜನಸಾಗರ
ಇದರಿಂದ ಎಡಕ್ಕೆಹೊರಳಿದರೆ ಸಂವಿಧಾನ ಪೀಠಿಕೆ ಇದೆ ಇದರ ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್, ಸಾಲುಮರದ ತಿಮ್ಮಕ್ಕ, ಸರಸ್ವತಿ ಸಿರಿಧಾನ್ಯಗಳಿಂದ ಮೂಡಿಬಂದಿದ್ದಾರೆ.
ದೇವೀರಮ್ಮಹೂವಿನ ದೇಗುಲ, ಇತ್ತೀಚೆಗೆ ಮಹಿಳಾ ವಿಶ್ವಕಪ್ ವಿಜೇತರ ಭಾವಚಿತ್ರವಿದೆ. ಹೂವಿನಿಂದ ಟ್ರೋಫಿಯನ್ನು ನಿರ್ಮಿಸಲಾಗಿದೆ. ಹೂವಿನಿಂದ ಮಾಡಿರುವ ಕಲಾಕೃತಿಗಳನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಜತೆಗೆ ಚಲನ ಚಿತ್ರನಟರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸುಂದರವಾಗಿ ಮೂಡಿಬಂದಿದ್ದಾರೆ. ಕಲ್ಲಂಗಡಿಯಲ್ಲಿ ರಾಷ್ಟ್ರ ಕವಿಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಗಿರೀಶ್ಕಾರ್ನಾರ್ಡ್, ಕಂಬಾರ, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಚಲನಚಿತ್ರ ನಟರಾದ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ಪುನೀತ್ರಾಜ್ಕುಮಾರ್, ಸಂಚಾರಿ ವಿಜಯ್ ಅವರನ್ನು ಬಿಡಿಸಲಾಗಿದೆ.