- ನಾಳೆ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆವರೆಗೆ ಅನ್ವಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಆದೇಶ । - - - ಕನ್ನಡಪ್ರಭ ವಾರ್ತೆ ದಾವಣಗೆರೆ
1. ಹರಿಹರ ಕಡೆಯಿಂದ ಬಾತಿ ಮೂಲಕ ಹಳೇ ಪಿ.ಬಿ. ರಸ್ತೆಯಲ್ಲಿ ಬರುವ ಎಲ್ಲ ತರಹದ ಭಾರಿ ವಾಹನಗಳು ಮತ್ತು ಖಾಸಗಿ ಬಸ್ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಚಲಿಸಿ, ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು, ಎ.ಪಿ.ಎಂ.ಸಿ ದನದ ಮಾರ್ಕೆಟ್ ಆವರಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ, ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ತೆರಳಬೇಕು.
2. ಹರಿಹರ ಕಡೆಯಿಂದ ಬಾತಿ ಮೂಲಕ ಹಳೇ ಪಿ.ಬಿ. ರಸ್ತೆಯಲ್ಲಿ ಬರುವ ಎಲ್ಲ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಚಲಿಸಿ, ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು, ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಕಾರ್ಯನಿರ್ವಹಿಸಬೇಕು.ಚಿತ್ರದುರ್ಗ ಮತ್ತು ಸಂತೆಬೆನ್ನೂರು (ಬೀರೂರು-ಸಮಸಗಿ ರಸ್ತೆ) ಮಾರ್ಗವಾಗಿ ಬರುವ ವಾಹನಗಳು ಮತ್ತು ಖಾಸಗಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ಎ.ಪಿ.ಎಂ.ಸಿ ಯ ದನದ ಮಾರ್ಕೆಟ್ ಆವರಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಸಾಗಬೇಕು.
4. ಜಗಳೂರು ಮತ್ತು ಕಂಚಿಕೆರೆ ಮಾರ್ಗವಾಗಿ ಬರುವ ಎಲ್ಲ ಕೆ.ಎಸ್.ಆರ್.ಟಿ.ಸಿ ಬಸ್ಗಳು ವೆಂಕಟೇಶ್ವರ ಸರ್ಕಲ್ನಿಂದ ಬಂಬೂ ಬಜಾರ್ ರಸ್ತೆ ಮಾರ್ಗವಾಗಿ ಆರ್ಎಂಸಿ ಫೈ ಓವರ್ ಮುಖಾಂತರ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಸ್ ಅದೇ ಮಾರ್ಗವಾಗಿ ಕಾರ್ಯನಿರ್ವಹಿಸಬೇಕು.
6. ಶಾಮನೂರು ಬೈಪಾಸ್ ಮೂಲಕ ಬರುವ ಎಲ್ಲ ತರಹದ ಭಾರಿ ವಾಹನಗಳು ಶಾರದಾಂಬ ಸರ್ಕಲ್ ಮೂಲಕ ಬಾಲಾಜಿ ಸರ್ಕಲ್ ಕಡೆ ಚಲಿಸುವುದು, ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆ ಬಾರದೇ ಜಿ.ಎಂ.ಐ.ಟಿ. ಕಾಲೇಜು ಕಡೆ ಚಲಿಸಬೇಕು.
- - - ಗಣಪತಿ.ಜೆಪಿಜಿ (ಸಾಂದರ್ಭಿಕ ಚಿತ್ರ)-3ಕೆಡಿವಿಜಿ42ಃ: ಜಿ.ಎಂ.ಗಂಗಾಧರ ಸ್ವಾಮಿ