ಗಜೇಂದ್ರಗಡ: ಭಾರತೀಯ ಸಂಸ್ಕೃತಿ ಹಾಗೂ ಧರ್ಮಾಚರಣೆ ಅತ್ಯಂತ ಸನಾತನ ಧರ್ಮವಾಗಿದ್ದು, ಭಾರತೀಯ ಪರಂಪರೆ ಅನ್ಯದೇಶಿಯರು ಅನುಸರಿಸುತ್ತಿದ್ದಾರೆ, ವೈಜ್ಞಾನಿಕತೆ ಹಿನ್ನೆಲೆ ಹೊಂದಿದ ನಮ್ಮ ಧರ್ಮ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಚೈತನ್ಯಾಶ್ರಮ ಶ್ರೀಕ್ಷೇತ್ರ ಹೆಬ್ಬಳ್ಳಿ ದತ್ತಾವಧೂತ ಮಹಾರಾಜರು ಹೇಳಿದರು.
ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ಸಂಕಷ್ಟಗಳು ದೂರುವಾಗುತ್ತವೆ. ಒತ್ತಡದ ಬದುಕು ದೂರವಾಗಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ರಾಮಚಂದ್ರನ ಪರಮ ಭಕ್ತ ಹನುಮಂತನನ್ನು ಸ್ತುತಿಸುವ ನಲವತ್ತು ಪದ್ಯ ಚರಣಗಳನ್ನು ಹನುಮಾನ್ ಚಾಲೀಸಾ ಎಂದು ಕರೆಯುತ್ತಾರೆ. ಗೋಸ್ವಾಮಿ ತುಳಸಿದಾರು ರಚಿಸಿದ ಹನುಮಾನ್ ಚಾಲೀಸ್ ಪಠಣದಿಂದ ಮನುಷ್ಯನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು. ಮುಖ್ಯವಾಗಿ ಶನಿ ಕಾಟ ಹೊಂದಿರುವವರು ಹನುಮಾನ್ ಚಾಲೀಸ್ ಪಠಣದಿಂದ ಶನಿಕಾಟ ದೂರವಾಗುತ್ತದೆ. ವಿಶೇಷವಾಗಿ ಪ್ರತಿ ರಾತ್ರಿ ಪಠಿಸುವುದರಿಂದ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು ಎಂದರು.
ಪಂ.ಭುಜಂಗಭಟ್ಟ ಜೋಶಿ ಹಾಗೂ ಚಿದಂಬರಭಟ್ಟ ಜೋಶಿ ಮಾತನಾಡಿದರು.ಇದೇ ವೇಳೆ ಪ್ರಸಕ್ತ ವರ್ಷದ ವಿಶ್ವಾವಸುನಾಮ ಸಂವತ್ಸರದ ಶ್ರೀಚಿದಂಬರ ಪಂಚಾಂಗವನ್ನು ಗುರುಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ಶಿವಚಿದಂಬರ ಸ್ವಾಮಿಗಳ ೫೪ನೇ ಜನೋತ್ಸವ ಪ್ರಯುಕ್ತ ವೇದಘೋಷ, ಭಜನೆ ಹಾಗೂ ವಿವಿಧ ವಾದ್ಯವೈಭವಗೊಳೊಂದಿಗೆ ಚಿದಂಬರೇಶ್ವರ ರಥೋತ್ಸವ ಸಕಲ ಸದ್ಭಕ್ತರ ಮಧ್ಯೆ ವೈಭವದಿಂದ ಜರುಗಿತು.