ಚೆಪ್ಪುಡಿರ, ಪರದಂಡ, ಕುಪ್ಪಂಡ, ಕುಲ್ಲೇಟಿರ ಮುಂದಿನ ಸುತ್ತಿಗೆ

KannadaprabhaNewsNetwork |  
Published : Dec 28, 2025, 04:00 AM IST
ಪಂದ್ಯಾವಳಿ | Kannada Prabha

ಸಾರಾಂಶ

ಚೆಪ್ಪುಡಿರ, ಪರದಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು. ಕುಪ್ಪಂಡ ಹಾಗೂ ಕುಲ್ಲೇಟಿರ ತಂಡಗಳು ಗೆಲವು ಸಾಧಿಸಿ ಮುಂದಿನ ಸುದ್ದಿಗೆ ಪ್ರವೇಶಿಸಿದವು.

ಕನ್ನಡಪ್ರಭ ವಾರ್ತೆ ನಾಪೋಕ್ಲುಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಶನಿವಾರದ ಪಂದ್ಯಾಟದಲ್ಲಿ ಚೆಪ್ಪುಡಿರ, ಪರದಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು. ಕುಪ್ಪಂಡ ಹಾಗೂ ಕುಲ್ಲೇಟಿರ ತಂಡಗಳು ಗೆಲವು ಸಾಧಿಸಿ ಮುಂದಿನ ಸುದ್ದಿಗೆ ಪ್ರವೇಶಿಸಿದವು.ಚೆಪ್ಪುಡಿರ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ 9-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಚೆಪ್ಪುಡಿರ ಪ್ರಣವ್ ಹಾಗೂ ನರೇನ್ ತಲಾ ಎರಡು, ಸೋಮಣ್ಣ, ಚೇತನ್, ಅಯ್ಯಪ್ಪ, ನಾಚಪ್ಪ, ದಿವನ್ ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಕೋಣೇರಿರ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ಪರದಂಡ ತಂಡ 6-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪರದಂಡ ಚೆಶ್ವಿನ್ ಹಾಗೂ ರಂಜನ್ ಅಯ್ಯಪ್ಪ ತಲಾ ಎರಡು, ಪ್ರಧಾನ್, ಧೀರಜ್ ಮುತ್ತಣ್ಣ ತಲಾ ಒಂದು ಗೋಲು ದಾಖಲಿಸಿದರು.ಕೂತಂಡ ಮತ್ತು ಕುಪ್ಪಂಡ ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ ಪರ ಚಂಗಪ್ಪ, ಶ್ಯಾನ್ ಹಾಗೂ ಜಗತ್ ತಲಾ ಒಂದು ಗೋಲು ಬಾರಿಸಿದರು. ಕೂತಂಡ ಪರ ಬೋಪಣ್ಣ ಕೆ.ಸಿ ಎರಡು ಗೋಲು ದಾಖಲಿಸಿದರು.ಕುಲ್ಲೇಟಿರ ಮತ್ತು ಮಾಚಮಾಡ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡ 5-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಲ್ಲೇಟಿರ ಮಂದಪ್ಪ ತಲಾ ಎರಡು, ಚಿಟ್ಟಿಯಪ್ಪ, ಮುತ್ತಣ್ಣ ಹಾಗೂ ತಿಮ್ಮಯ್ಯ ತಲಾ ಒಂದು ಗೋಲು ಬಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ