ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ 51ನೇ ಮುಕ್ತ ಚದುರಂಗ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಆರವ್ ಸರ್ಬಾಲಿಯ ಪ್ರಥಮ, ಚೆನ್ನೈನ ಪಿ ಆರ್. ಹೃತಿಕೇಶ್ ದ್ವಿತೀಯ, ಭುವನ್ ಕೃಷ್ಣ ಪ್ರಶಾಂತ್ ತೃತೀಯ ಸ್ಥಾನ ಪಡೆದುಕೊಂಡರು.
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ 51ನೇ ಮುಕ್ತ ಚದುರಂಗ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಆರವ್ ಸರ್ಬಾಲಿಯ ಪ್ರಥಮ, ಚೆನ್ನೈನ ಪಿ ಆರ್. ಹೃತಿಕೇಶ್ ದ್ವಿತೀಯ, ಭುವನ್ ಕೃಷ್ಣ ಪ್ರಶಾಂತ್ ತೃತೀಯ ಸ್ಥಾನ ಪಡೆದುಕೊಂಡರು.
ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭುವನ್ ಕೃಷ್ಣ ಪೂಜಾರಿ-ಪ್ರಥಮ, ನಿವಾನ್ ತ್ರಿಶಾಲ್-ದ್ವಿತೀಯ ಮತ್ತು ರಿಷಿಕೇಶ್ ಆನಂದ್-ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಎಂಎಚ್ ಶಿವಾನಿಬಾಯಿ-ಪ್ರ, ಅನ್ವಿತಾ ಕೊನೆರು-ದ್ವಿ, ಹಾಸಿನಿ ಉದಯಕುಮಾರ್-ತೃ, 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೋಮರಾಜು ಸಾಯಿ ವಿವನ್ ಕಾರ್ತಿಕೇಯ-ಪ್ರ, ಸಾಥಿಕ್ ವಿಶ್ವನಾಥ್-ದ್ವಿ, ಲವಿತ್ ಸುಭಾಷ್-ತೃ ಬಾಲಕಿಯರ ವಿಭಾಗದಲ್ಲಿ ತನಿಷ ನಾರಾಯಣ್-ಪ್ರ, ಶ್ರಿಯಾ ವಿ ಅತ್ತಿಗನಾಳ್-ದ್ವಿ, ಸಾನಿಯಾ ಅಮೀನ್-ತೃ, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವೇದಾಂತ್ ಮಲ್ಲಾಡಿ-ಪ್ರ, ಕಿಲಾರಿ ಜ್ಯೋತಿರಾ ಆದಿತ್ಯ-ದ್ವಿ, ಎ ಅಭಿಷೇಕ್-ತೃ, ಬಾಲಕಿಯರ ವಿಭಾಗದಲ್ಲಿ ಜೆ ಕೃಷಿಕ-ಪ್ರ, ಎಸ್ ಮಿತ್ರ ಶ್ರೀ-ದ್ವಿ, ಎನ್ ಭಾವನಾ-ತೃ, 16 ವರ್ಷದ ಬಾಲಕರ ವಿಭಾಗದಲ್ಲಿ ಸಂಗಮೇಶ್ ವಿ ಸುಗಂಧಿ-ಪ್ರ, ಅದ್ವಿತ್ ಕೆ ಮಿಶ್ರಾ-ದ್ವಿ, ಅಂಶಿಕ್ ಚಕ್ರವರ್ತಿ-ತೃ, ಬಾಲಕಿಯರ ವಿಭಾಗದಲ್ಲಿ ಜಿ ಐಶ್ವರ್ಯ-ಪ್ರ, ಎಎಸ್. ಶ್ರೀ ದ್ವಿ, ಸಾಹಿತಿ ಪುಲ್ಲೇಲಾ-ತೃ ಪಡೆದುಕೊಂಡಿದ್ದಾರೆ.
ಎಲ್ಲ ವಿಜೇತ ಚೆಸ್ ಆಟಗಾರರಿಗೆ ನಿವೃತ್ತ ಐಎಎಸ್ ಅಧಿಕಾರಿ ಸಿ.ಎ ನಾರಾಯಣ್, ಜಿಲ್ಲಾ ಕಾರ್ಯದರ್ಶಿ ಚಿದಾನಂದ, ಜಿ.ಹರೀಶ್ ಎಸ್ ಜ್ಯೋತಿ, ಕೆ.ಮುರುಗನ್ ಸುಂದರಾA ಸೇರಿದಂತೆ ಹಲವಾರು ಗಣ್ಯರು ಬಹುಮಾನಗಳನ್ನ ವಿತರಿಸಿದರು.ಫೋಟೋ : 17 ಹೆಚ್ಎಸ್ಕೆ 1
ಹೊಸಕೋಟೆ ನಗರದಲ್ಲಿ ನಡೆದ 51ನೇ ಮುಕ್ತ ಮತ್ತು ವಿವಿಧ ವಯೋಮಾನದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದ ಪಟುಗಳಿಗೆ ಬಹುಮಾನ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.