ಹೊಸಕೋಟೆ: ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸುಧಾರಿಸಲು ಚೆಸ್ ಕ್ರೀಡೆ ಸಾಕಷ್ಟು ಪೂರಕ ಎಂದು ಶೃಂಗಾ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ ತಿಳಿಸಿದರು.
ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಎ.ಚಿದಾನಂದ ಮಾತನಾಡಿ, ಎಐಸಿಎಫ್, ಎಫ್ಐಡಿಇ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಶೃಂಗಾ ಶಾಲೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಚೆಸ್ ಚಾಂಪಿಯನ್ ಶಿಫ್ ಆಯೋಜನೆ ಮಾಡಲಾಗಿದೆ. ರಾಜ್ಯದ 25 ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚಿನ ಚೆಸ್ ಪಟುಗಳು ಆಗಮಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ರಾಪಿಡ್ ಸ್ಪರ್ಧೆಗೆ 2 ಲಕ್ಷ ಹಾಗೂ ಬ್ಲಿಟ್ಜ್ ಸ್ಪರ್ಧೆಗೆ 50 ಸಾವಿರ ನಗದು ಬಹುಮಾನ ನೀಡಲಿದ್ದೇವೆ ಎಂದು ಹೇಳಿದರು.
ಶೃಂಗಾ ಶಾಲೆ ಕಾರ್ಯದರ್ಶಿ ಪ್ರಕಾಶ್, ಆಡಳಿತ ಮಂಡಳಿ ನಿರ್ದೇಶಕ ಶ್ರೇಯಸ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.(ಫೋಟೋ)
ಹೊಸಕೋಟೆ ತಾಲೂಕಿನ ದೊಡ್ಡದುನ್ನಸಂದ್ರದ ಶೃಂಗಾ ಶಾಲೆಯಲ್ಲಿ ಆಯೋಜಿಸಿದ್ದ ರಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಪಂದ್ಯಾವಳಿಯನ್ನು ಶೃಂಗಾ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ, ರಾಜ್ಯಶಾಸ್ತ್ರ ಅಸೋಸಿಯೇಷನ್ ಉಪಾಧ್ಯಕ್ಷ ಚಿದಾನಂದ ಉದ್ಘಾಟಿಸಿದರು.25 ಹೆಚ್ಎಸ್ಕೆ 3ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚೆಸ್ ಕ್ರೀಡಾಪಟುಗಳು ಚೆಸ್ ಪಂದ್ಯಾವಳಿಯಲ್ಲಿ ತೊಡಗಿರುವುದು.