ಚಿಕ್ಕಹಳ್ಳಿ ಗ್ರಾಪಂಗೆ ರಾಮಾಂಜಿನಮ್ಮ ಅಧ್ಯಕ್ಷೆ

KannadaprabhaNewsNetwork |  
Published : Jun 14, 2025, 03:20 AM IST
ಫೋಟೋ 13ಪಿವಿಡಿ2.13ಪಿವಿಜಿ2ಪಾವಗಡ,ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ,ರಾಮಾಂಜಿನಮ್ಮ ಗೋಪಿ ಆಯ್ಕೆಯಾಗಿದ್ದು ನೂತನ ಅಧ್ಯಕ್ಷರನ್ನು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಟಾಮಾಲೆ ಅರ್ಪಿಸಿ ಅಭಿನಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಚಿಕ್ಕಹಳ್ಳಿ ಗ್ರಾಪಂಗೆ ಚುನಾವಣೆ ನಡೆದು ಕಾಂಗ್ರೆಸ್‌ ಬೆಂಬಲಿತರಾದ ರಾಮಾಂಜಿನಮ್ಮ ಗೋಪಿ ಅವರು ಗ್ರಾಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಚಿಕ್ಕಹಳ್ಳಿ ಗ್ರಾಪಂಗೆ ಚುನಾವಣೆ ನಡೆದು ಕಾಂಗ್ರೆಸ್‌ ಬೆಂಬಲಿತರಾದ ರಾಮಾಂಜಿನಮ್ಮ ಗೋಪಿ ಅವರು ಗ್ರಾಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಿಕ್ಕಹಳ್ಳಿ ಗ್ರಾಪಂನಲ್ಲಿ ಒಟ್ಟು 14ಮಂದಿ ಸದಸ್ಯರಿದ್ದು ಈ ಪೈಕಿ ಜೆಡಿಎಸ್‌ ಬೆಂಬಲಿತ ಪಾರ್ವತಮ್ಮ ಅವರಿಗೆ 6 ಹಾಗೂ ಕಾಂಗ್ರೆಸ್ ಬೆಂಬಲಿತೆ ಅಭ್ಯರ್ಥಿಗೆ 8 ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಗ್ರಾಪಂನ ನೂತನ ಅಧ್ಯಕ್ಷರಾಗಿ ರಾಮಾಂಜಿನಪ್ಪ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ತಹಸೀಲ್ದಾರ್‌ ವರದರಾಜು ತಿಳಿಸಿದ್ದಾರೆ.

ಚಿಕ್ಕಹಳ್ಳಿ ಗ್ರಾಪಂ ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷೆ ರಾಮಾಂಜಿನಪ್ಪ ಮಾಧ್ಯಮದ ಜತೆ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ವಿವಿಧ ಯೋಜನೆ ಅಡಿಯ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸರ್ವತೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಅಧ್ಯಕ್ಷರದ ಆಯ್ಕೆಗೆ ಸಹಕರಿಸಿದ ಮಾಜಿ ಸಚಿವರಾದ ವೆಂಕಟರಮಣಪ್ಪ,ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಗ್ರಾಪಂ ಸದಸ್ಯರಿಗೆ ಅಭಾರಿಯಾಗಿದ್ದೇನೆ. ನಾಗಲಾಪುರ ಗ್ರಾಮದ ಮಾಜಿ ತಾಪಂ ಸದಸ್ಯರಾದ ನಾಗರಾಜು, ಗೋವಿಂದಪ್ಪ, ಚಿಕ್ಕಹಳ್ಳಿ ಮಾಜಿ ತಾಪಂ ಸದಸ್ಯರಾದ ಮಾರಪ್ಪ, ದೊಡ್ಡಹಳ್ಳಿ ಗ್ರಾಮದ ಮಾಜಿ ಗ್ರಾಪಂ ಅದ್ಯಕ್ಷರಾದ ಅಕ್ಕಲಪ್ಪ, ಮೀನಾಕ್ಷಮ್ಮ ಅಂಜಿನಪ್ಪ, ಲಕ್ಷ್ಮಿ ವಿರೇಶ್, ರಾಮು, ಆರ್.ಟಿ.ರಾಮಾಂಜಿ ಅಂಜಿ ನಾಯಕ, ಶ್ರೀಧರಪ್ಪ, ಕೆ.ರಾಮಪುರ ಗ್ರಾಮದ ಮಾಜಿ ಗ್ರಾಪಂ ಸದಸ್ಯರಾದ ನರಸಿಂಹಮೂರ್ತಿ, ದೇವೆಂದ್ರ, ರಾಜು ಸೇರಿದಂತೆ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು. ಇದೇ ವೇಳೆ ಗ್ರಾಪಂ ಪಿಡಿಒ ಹಾಗೂ ಇತರೆ ಆನೇಕ ಮಂದಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''