ಕನ್ನಡಪ್ರಭ ವಾರ್ತೆ ಕೊಪ್ಪ
ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಪರಿಪೂರ್ಣವಾದಂತಹ ಎಲ್ಲರನ್ನ ಒಗ್ಗೂಡಿಸುವ ಭಾಷೆಯಾಗಿದೆ. ಜಗತ್ತು ವಿಶೇಷವಾದಂತಹ ಜ್ಞಾನದಿಂದ ಮುನ್ನಡೆಯುತ್ತಿದೆ. ಮನುಷ್ಯ ಸಾಧಿಸಿದ ಎಲ್ಲ ವಿಧದ ಪ್ರಗತಿಗೆ ಜ್ಞಾನವೂ ಮೂಲಾಧಾರವಾಗಿದೆ ಎಂದರು.
ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ವ್ಯಾಕರಣ ಚರಿತ್ರೆ ನಿಘಂಟು ಮರೆಯಾಗುತ್ತಿದೆ. ವಿದೇಶಿ ಸಂಸ್ಕೃತಿ ವ್ಯಾಮೋಹದಿಂದ ಭಾಷೆಗೆ ಕುತ್ತು ಬಂದಿದೆ ಎಂದರು.ಸಮ್ಮೇಳನಾಧ್ಯಕ್ಷೆ ಸಾಹಿತಿ ರೂಪಕಲಾ ಮಾತನಾಡಿ ಸುಂದರ ಪರಿಸರದ ಎಲ್ಲಾ ಆಗುಹೋಗುಗಳ ಬಗ್ಗೆ ವಿಷಯ ತಿಳಿಸಿ ಕಳವಳವನ್ನು ವ್ಯಕ್ತಪಡಿಸಿದರು.
ಎಸ್.ಎನ್.ರಾಮಸ್ವಾಮಿ, ಬಿ.ಎಚ್.ದಿವಾಕರ್ ಭಟ್, ಕೆ.ಜಿ.ಶೋಭಿಂತ್ ಸಮ್ಮೇಳನದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಕಲಾ, ರಂಗನಾಥ್ ವಲಯ ಅರಣ್ಯ ಅಧಿಕಾರಿಗಳು, ಎ.ಓ,ವೆಂಕಟೇಶ್, ಸುಮಿತ್ರನಾರಾಯಣ್ ಮಾತನಾಡಿದರು.
ಹಿರಿಯ ಸಾಧಕರಾದ ಕೆ.ಜಿ.ಎನ್ ಶಾಸ್ತ್ರಿ, ಮಂಜುನಾಥ್ ಸೆರೆಗಾರ್, ವಿಶ್ವನಾಥ್ ಹಾಲ್ಮೂತ್ತೂರು ಮೆಸ್ಕಾಂ, ಸುವರ್ಣ ಕೇಶವ ಹಾಗೂ ಸರೋಜಾ ರಾಮಕೃಷ್ಣರನ್ನು ಗೌರವಿಸಲಾಯಿತು. ಹರಿಹರಪುರ ಹೋಬಳಿಯ ಹಿರಿಯ ಅಡಿಕೆ ಕೊನೆಗಾರರಿಗೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ವಿಶೇಷವಾಗಿ ಏರ್ಪಡಿಸಲಾಗಿತ್ತು. ಶ್ರೀ ದುರ್ಗಾಪರಮೇಶ್ವರಿ ಭಂಡಿಗಡಿಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಹಾಗೂ ಮನು ಹಂದಾಡಿಯವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು. ಶುಕುರ್ ಅಹಮದ್, ರವಿಪ್ರಸಾದ್, ಸವಿತಾ ಶ್ರೀಹರ್ಷ, ರವೀಶ್ ರುದ್ರಾಕ್ಷಿಬೈಲ್, ನಾಗಪ್ಪ ಕೊಡ್ತಾಳ್, ಸರೋಜ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.