ಪ್ರತಿಭಾ ಪುರಸ್ಕಾರ । ಉಪ್ಪಾರ ನೌಕರರ ಕ್ಷೇಮಾಭಿವೖದ್ಧಿ ಸಂಘದ ವತಿಯಿಂದ ಕಾರ್ಯಕ್ರಮ
ಉಪ್ಪಾರ ಸಮಾಜದ್ದು ಭಗೀರಥ ಪ್ರಯತ್ನವಾಗಿದ್ದು, ನಾವು ಅಭಿವೖದ್ಧಿಯಾಗಬೇಕಾದರೆ ನಿರಂತರ ಪ್ರಯತ್ನ ಇರಲೆಬೇಕು. ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಅವರಿಗೆ ಮೌಲ್ಯಯುತ ಶಿಕ್ಷಣ ಎಂಬ ಆಸ್ತಿ ಕೊಡಿಸಿ ಅವರನ್ನು ಭವ್ಯ ಭಾರತದ ಪ್ರಜೆಯಾಗಿ ರೂಪಿಸಿ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
ಕೊಳ್ಳೇಗಾಲ, ಹನೂರು ಉಪ್ಪಾರ ಸರ್ಕಾರಿ ನೌಕರರ ಕ್ಷೇಮಾಭಿವೖದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಉಪ್ಪಾರ ಸಮಾಜ ಇನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದಿದ್ದು, ಭಗೀರಥ ಪ್ರಯತ್ನದ ಮೂಲಕವೇ ಸಬಲರಾಗಬೇಕು ಎಂದು ಹೇಳಿದರು.ಕೊಳ್ಳೇಗಾಲದಲ್ಲಿ ಒಂದು ತಿಂಗಳೊಳಗೆ ಜಾಗ ನೋಂದಣಿ ಮಾಡಿಸಿಕೊಂಡರೆ ಭವನ ನಿಮಾ೯ಣಕ್ಕೆ 20 ಲಕ್ಷ ಅನುದಾನ ನೀಡುವೆ. ಉಪ್ಪಾರ ಸಮಾಜದ ಉನ್ನತಿ ಸಾಧಿಸಬೇಕು ಎಂಬುದು ನನ್ನ ಅಭಿಲಾಷೆ ಎಂದ ಅವರು, ರಾಜ್ಯಾದ್ಯಂತ ಈ ಬಾರಿ ಉನ್ನತ ಶ್ರೇಣಿಯಲ್ಲಿ ಉಪ್ಪಾರ ಸಮಾಜದ ವಿದ್ಯಾಥಿ೯ಗಳು ತೇರ್ಗಡೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ರಾಜ್ಯ ಉಪ್ಪಾರ ಅಭಿವೖದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ಹೆಣ್ಣುಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸುವ ಸಂಕಲ್ಪವನ್ನು ಸಮಾಜದ ಬಂಧುಗಳು ಮಾಡಬೇಕಿದೆ. ನಾವೆಲ್ಲರೂ ಸಂಘಟಿತರಾಗುವ ಮೂಲಕ ಸವಲತ್ತು, ಸ್ಥಾನಮಾನ ಪಡೆದುಕೊಳ್ಳಬೇಕು ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಕೊಯಮತ್ತೂರು ಕೆನರಾ ಬ್ಯಾಂಕ್ ರಿಜನಲ್ ಮ್ಯಾನೇಜರ್ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ಅಭಿವೖದ್ಧಿ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಗ್ರಾಪಂನ ಮಾಜಿ ಸದಸ್ಯ ಸೋಮಣ್ಣ ಉಪ್ಪಾರ್, ಉಪ್ಪಾರ ಕ್ಷೇಮಾಭಿವೖದ್ಧಿ ಸಂಘದ ಗೋವಿಂದರಾಜು, ಮುಳ್ಳೂರು ಮಹೇಶ, ರಾಜು, ಮಾದೇಶ್, ಮುಖಂಡರಾದ ಚಿಕ್ಕತಾಂಡಶೆಟ್ಟಿ, ಪ್ರಸಾದ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇದ್ದರು.
- ಎ.ಆರ್. ಕೃಷ್ಣಮೂರ್ತಿ. ಶಾಸಕ.