ಮಕ್ಕಳಲ್ಲಿ ವಿದ್ಯೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿ

KannadaprabhaNewsNetwork |  
Published : Jan 17, 2025, 12:49 AM IST
ಕಾರ್ಯಕ್ರಮವನ್ನು ಅಲ್‌ಹಾಜ್ ಸರ್ಫರಾಜ್ ಅಹಮ್ಮದ್ ಉಮಚಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳು ಯಾವಾಗಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾತ್ರ ಮುಂದುವರೆಯಬಾರದು ಜತೆಗೆ ವಿದ್ಯೆಯಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತಂದರೆ ಶಾಲೆಯ ಕೀರ್ತಿ ಹೆಚ್ಚುತ್ತದೆ

ಗದಗ: ನಗರದ ಹಿದಾಯತ್ ಪ್ರಿ ಪ್ರಾಥಮಿಕ ಹಾಗೂ ಜೆ.ಯು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.

ಅಜಾದ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಅಲ್‌ಹಾಜ್ ಸರ್ಫರಾಜ್ ಅಹಮ್ಮದ್ ಉಮಚಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ಯಾವಾಗಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾತ್ರ ಮುಂದುವರೆಯಬಾರದು ಜತೆಗೆ ವಿದ್ಯೆಯಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತಂದರೆ ಶಾಲೆಯ ಕೀರ್ತಿ ಹೆಚ್ಚುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ, ಇಲಕಲ್‌ನ ಅರೇಬಿಕ್ ಸ್ಕೂಲ್ ಶಿಕ್ಷಕ ಲಾಲಹುಸೇನ್ ಕಂದಗಲ್ ಹಾಗೂ ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಜುನೇದ ಉಮಚಗಿ ಅಧ್ಯಕ್ಷತೆ ವಹಿಸಿದ್ದರು. ಕೆ.ಐ.ಶೇಖ,ವಿಜಯಕುಮಾರ ಗಡ್ಡಿ, ಅಶ್ಪಾಕ್ ಹೊಸಳ್ಳಿ, ಹಾಜಿ ಇಕ್ಬಾಲ್ ಹಣಗಿ, ಅಬ್ದುಲ್ ಹಫಿಜ್ ಉಮಚಗಿ, ಶಾಲೆಯ ಪ್ರಧಾನ ಗುರುಮಾತೆ ಪರವಿನ ಗುದಗಿ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ