ಕ್ರೀಡಾ ದಿನ ಅಂಗವಾಗಿ ಮ್ಯಾರಥಾನ್

KannadaprabhaNewsNetwork |  
Published : Sep 02, 2024, 02:03 AM IST
ಪಓಟಓ | Kannada Prabha

ಸಾರಾಂಶ

ಓವೆಲ್ ಮೈದಾನದಲ್ಲಿ ನಡೆದ ಓಟವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು

ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.ನಗರದ ಓವೆಲ್ ಮೈದಾನದಲ್ಲಿ ನಡೆದ ಓಟವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವಿವಿಧ ವಯೋಮಾನದವರಿಗೆ ಪ್ರತ್ಯೇಕ ಓಟ ಆಯೋಜಿಸಲಾಗಿತ್ತು.10 ರಿಂದ 15 ವರ್ಷದ ಬಾಲಕ, ಬಾಲಕಿಯರಿಗೆ 2 ಕಿ.ಮೀ. ಓಟ, 15 ರಿಂದ 30 ವರ್ಷದವರಿಗೆ 3 ಕಿ.ಮೀ. ಓಟ, 31 ರಿಂದ 50 ವರ್ಷದವರಿಗೆ 3 ಕಿ.ಮೀ. ಓಟ, 50 ವರ್ಷ ಮೇಲ್ಪಟ್ಟವರಿಗೆ 2 ಕಿ.ಮೀ. ಓಟ ಮತ್ತು ನಡಿಗೆ ಮತ್ತು ಸೈನಿಕರು ಹಾಗು ಮಾಜಿ ಸೈನಕರಿಗೆ 2 ಕಿ.ಮೀ. ಸೌಹಾರ್ದ ಓಟ ಆಯೋಜಿಸಲಾಗಿತ್ತು.ಮೊದಲು ಮೂರು ವಿಭಾಗಗಳಿಗೆ ನಗದು ಬಹುಮಾನ ನೀಡಲಾಯಿತು. ಪಾಲ್ಗೊಂಡಿದ್ದ ಎಲ್ಲರಿಗೂ ಟೀ ಶರ್ಟ್, ಮೆಡಲ್, ಸರ್ಟಿಫಿಕೇಟ್, ಹಣ್ಣು ಮತ್ತು ಪಾನೀಯ ನೀಡಲಾಯಿತು.

ಈ ವೇಳೆ ಮಾಜಿ ಸಚಿವ ಸಾ.ರಾ. ಮಹೇಶ್, ಲಾ ಗೈಡ್ಪತ್ರಿಕೆ ಸಂಪಾದಕ ವೆಂಕಟೇಶ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಅಥ್ಲೆಟಿಕ್ಸ್ ತರಬೇತುದಾರ ಟಿ,ಎಸ್. ರವಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''