ಪ್ರಾಚೀನ ಪಾರ್ಲಿಮೆಂಟ್‌ಗಳ ಪ್ರದಕ್ಷಿಣೆಗಳು

KannadaprabhaNewsNetwork | Published : Aug 15, 2024 1:47 AM

ಸಾರಾಂಶ

ಹಳ್ಳಿಹಕ್ಕಿಯ ಹಾಡು, ಮತಸಂತೆ, ಮಲ್ಲಿಗೆಯ ಮಾತು, ಆಪತ್ಸ್ಥಿತಿಯ ಆಲಾಪಗಳು, ಸಿರಿಭೂಮಿ, ದಿ ಟಾಕಿಂಗ್ ಶಾಪ್, ಅಥೆನ್ಸಿನ ರಾಜ್ಯಾಡಳಿತ ಕೃತಿಗಳನ್ನು ಪ್ರಕಟಿಸಿದ್ದು,

ಕನ್ನಡಪ್ರಭ ವಾರ್ತೆ ಮೈಸೂರುವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ''''ಪ್ರಾಚೀನ ಪಾರ್ಲಿಮೆಂಟ್ಗಳ ಪ್ರದಕ್ಷಿಣೆಗಳು'''' ಕೃತಿಯನ್ನು ಹೊರತಂದಿದ್ದಾರೆ. ಅವರು ವಿವಿಧ ದೇಶಗಳ ಸಂಸತ್ಗಳಿಗೆ ಭೇಟಿ ನೀಡಿ, ಅಲ್ಲಿನ ಅನುಭವನಗಳನ್ನು ಇಲ್ಲಿ ದಾಖಲಿಸಿದ್ದಾರೆ.ವಿಶ್ವನಾಥ್ ಅವರು ಈಗಾಗಲೇ ಹಳ್ಳಿಹಕ್ಕಿಯ ಹಾಡು, ಮತಸಂತೆ, ಮಲ್ಲಿಗೆಯ ಮಾತು, ಆಪತ್ಸ್ಥಿತಿಯ ಆಲಾಪಗಳು, ಸಿರಿಭೂಮಿ, ದಿ ಟಾಕಿಂಗ್ ಶಾಪ್, ಅಥೆನ್ಸಿನ ರಾಜ್ಯಾಡಳಿತ ಕೃತಿಗಳನ್ನು ಪ್ರಕಟಿಸಿದ್ದು, ಪ್ರಾಚೀನ ಪಾರ್ಲಿಮೆಂಟಿನ ಪ್ರದಕ್ಷಿಣೆಗಳು ಎಂಟನೇಯದು. ಭಾರತ, ಅಥೆನ್ಸ್, ಸಿಂಗಾಪುರ್, ಪೋಲೆಂಡ್, ಇಂಗ್ಲೆಂಡ್ ಸೇರಿದಂತೆ ಪ್ರಪಂಚದ ಕೆಲವು ಮುಖ್ಯ ಸಂಸತ್‌ಗಳನ್ನು ಆಗಾಗ ಸಂದರ್ಶಿಸಿರುವ ವಿಶ್ವನಾಥ್ ಈಗ ಬದುಕುತ್ತಿರುವ ವ್ಯವಸ್ಥೆ, ಅದರ ಚರಿತ್ರೆ, ಮಹತ್ವ, ಸೌಂದರ್ಯಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.''''ಸಂಸತ್ ಎಂಬ ಶಬ್ದ ನಮಗೆಲ್ಲ ಗೊತ್ತು. ಆದರೆ ನಮ್ಮೆಲ್ಲರ ಆಶೋತ್ತರಗಳನ್ನು ಪ್ರತಿನಿಧಿಸುವ, ನಮ್ಮೆಲ್ಲರ ಜೀವನ ಮಟ್ಟ ಮೌಲ್ಯಗಳಲ್ಲಿ ಸುಧಾರಣೆ ತರಬೇಕಾದ ಸಂಸತ್ತುಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಜನಪ್ರತಿನಿಧಿಗಳು ಕೂಡ ಪಾರ್ಲಿಮೆಂಟುಗಳ ಬಗ್ಗೆ ತಿಳಿಯುವ ಉಮೇದನ್ನು ತೋರಿಸುವುದು ಕಡಿಮೆಯೇ. ಆದರೆ ನಾನು ಮೈಸೂರು- ಕೊಡಗು ಕ್ಷೇತ್ರದಿಂದ ಸಂಸತ್‌ಗೆ ಚುನಾಯಿತನಾದಾಗ ಪ್ರಭಾವಿಸಿತು. ಹೀಗಾಗಿ ಪ್ರಪಂಚದ ಪುರಾತನ ಪಾರ್ಲಿಮೆಂಟುಗಳ ಅಧ್ಯಯನ, ವೀಕ್ಷಣೆ, ಸಂಶೋಧನೆಗೆ ಪ್ರೇರೇಪಿಸಿದವು'''' ಎಂದು ಅವರು ಹೇಳಿಕೊಂಡಿದ್ದಾರೆ.ಭಾರತದ ಸಂಸತ್ ಭವನ, ಯುರೋಪಿನ ಸ್ಟ್ರಾಸ್ ಬರ್ಗ್ ಪಾರ್ಲಿಮೆಂಟ್, ಗ್ರೀಸ್‌ನ ಹೆಲೆನಿಕ್ ಪಾರ್ಲಿಮೆಂಟ್, ಬುಡಾಪೆಸ್ಟ್ ಪಾರ್ಲಿಮೆಂಟ್, ಸಿಂಗಾಪುರ್ ಪಾರ್ಲಿಮೆಂಟ್, ಅಮೆರಿಕಾದ ಪಾರ್ಲಿಮೆಂಟ್, ಲಂಡನ್ ಪಾರ್ಲಿಮೆಂಟ್ ಕುರಿತ ತೌಲನಿಕ ಅಧ್ಯಯನ, ವಿಮರ್ಶಾತ್ಮಕ ಬರಹವನ್ನು ಇಲ್ಲಿ ಕಾಣಬಹುದು. ಬೆಂಗಳೂರಿನ ದೇಸಿ ಪುಸ್ತಕ ಪ್ರಕಟಿಸಿದ್ದು, ಆಸಕ್ತರು ಪ್ರಕಾಶಕ ಸೃಷ್ಟಿ ನಾಗೇಶ್, ಮೊ. 98450 96668 ಸಂಪರ್ಕಿಸಬಹುದು.-- ಬಾಕ್ಸ್---

-- 17 ರಂದು ಬಿಡುಗಡೆ--ಸೃಷ್ಟಿ ಪಬ್ಲಿಕೇಷನ್ಸ್, ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ, ಮೈಸೂರು ಜಿಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಸ್ನೇಹಿತರು, ಅಭಿಮಾನಿಗಳು ಹಾಗೂ ಕುಟುಂಬ ಬಳಗದ ಸಂಯುಕ್ತ ಆಶ್ರಯದಲ್ಲಿ ಆ.17 ರಂದು ಬೆಳಗ್ಗೆ 11 ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಾಚೀನ ಪಾರ್ಲಿಮೆಂಟ್‌ಗಳ ಪ್ರದಕ್ಷಿಣೆಗಳು ಕೃತಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡುವರು. ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮುಖ್ಯ ಅತಿಥಿಯಾಗಿರುವರು. ವಿಶ್ರಾಂತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಕೃತಿ ಕುರಿತು ಮಾತನಾಡುವರು. ಪ್ರಕಾಶಕ ಸೃಷ್ಟಿ ನಾಗೇಶ್ ಉಪಸ್ಥಿತರಿರುವರು. ಆರಂಭದಲ್ಲಿ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದಿಂದ ಗೀತಗಾಯನ ಇದೆ.-

Share this article