ಕನ್ನಡಪ್ರಭ ವಾರ್ತೆ ಚಿಂತಾಮಣಿ
ದೇಶಕ್ಕೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಆತ್ಮ ನಿರ್ಭರ ಮೂಲಕ ತಯಾರಿಸಿ, ಅವುಗಳನ್ನು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರಿಗೆ ತಕ್ಕ ಪಾಠ ಕಲಿಸಲು ಬಳಸಿ ಯಶಸ್ವಿಯಾದರು. ಈ ಹಿನ್ನೆಲೆ ಇಡೀ ದೇಶವೇ ಭಾರತದತ್ತ ತಿರುಗಿ ನೋಡುವಂತಾಗಿದೆಯೆಂದರು.
ದೇಶ, ಹಿಂದೂ ಮತ್ತು ಹಿಂದುತ್ವ ಸೇರಿ ದೇಶದ ಸಂಸ್ಕೃತಿಗೆ ರಕ್ಷಣೆ ನೀಡುವುದರ ಜೊತೆಗೆ ದೇಶದ ಕೀರ್ತಿಯನ್ನೂ ಹೆಚ್ಚಿಸಿ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯು ಸಾಕ್ಷಿಯಾಗಿದೆಯೆಂದರು.ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರು, ಯುವಕರು ಭಾಗವಹಿಸಿದ್ದರು, ಇದರೊಂದಿಗೆ ವಿವಿಧ ಗಿಡಗಳನ್ನು ನೆಟ್ಟು ಪ್ರಧಾನಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಕುರುಟಹಳ್ಳಿ ಡಾಬಾ ಮಂಜುನಾಥ್, ಮಾಜಿ ತಾಲೂಕು ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಸದಾಶಿವರೆಡ್ಡಿ, ಮಾಡಿಕೆರೆ ಅರುಣ್ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕರು ಹಾಲಿ ಗ್ರಾ.ಪಂ ಸದಸ್ಯರು ಎನ್.ಶ್ರೀನಿವಾಸರೆಡ್ಡಿ, ಕೋಟಗಲ್ ಪ್ರದೀಪ್, ಮೂರ್ತಿ ಆಂಜಿನಪ್ಪ, ವೀರಭದ್ರಪ್ಪ, ಶ್ರೀನಿವಾಸ್ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.