ಜನತೆ ತಲೆತಗ್ಗಿಸುವಂತೆ ಸಿಎಂ ಹೇಳಿಕೆ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Apr 28, 2025, 12:45 AM IST
27ರೆಡ್ಡಿ | Kannada Prabha

ಸಾರಾಂಶ

ನೀವು ನಾವು ಶಾಶ್ವತ ಅಲ್ಲ, ಈ ದೇಶ, ನೆಲ, ಜಲ, ಭೂಮಿ ಶಾಶ್ವತ. ಪಾಕಿಸ್ತಾನ ದೇಶದ ಪರ ಹೇಳಿಕೆ ಕೊಡುವುದು ಮೂರ್ಖತನ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ, ಈ ವಯಸ್ಸಲ್ಲಾದರೂ ಭರತ ಭೂಮಿ, ಪುಣ್ಯಭೂಮಿಯ ಪರವಾಗಿ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ನಿಮ್ಮದು ರಾಕ್ಷಸಿ ಮನೋಭಾವ, ಶ್ರೀ ಕೃಷ್ಣನೇ ನಿಮಗೆ ಉತ್ತರ ಕೊಡುತ್ತಾನೆ ಎಂದು ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ಜನತೆ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನೀವು ನಾವು ಶಾಶ್ವತ ಅಲ್ಲ, ಈ ದೇಶ, ನೆಲ, ಜಲ, ಭೂಮಿ ಶಾಶ್ವತ. ಪಾಕಿಸ್ತಾನ ದೇಶದ ಪರ ಹೇಳಿಕೆ ಕೊಡುವುದು ಮೂರ್ಖತನ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ, ಈ ವಯಸ್ಸಲ್ಲಾದರೂ ಭರತ ಭೂಮಿ, ಪುಣ್ಯಭೂಮಿಯ ಪರವಾಗಿ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ನಿಮ್ಮದು ರಾಕ್ಷಸಿ ಮನೋಭಾವ, ಶ್ರೀ ಕೃಷ್ಣನೇ ನಿಮಗೆ ಉತ್ತರ ಕೊಡುತ್ತಾನೆ ಎಂದು ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪಹಲ್ಗಾಂನಲ್ಲಿ ನಡೆದ ಘಟನೆಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದುಷ್ಟ ಸಂಹಾರ ಮಾಡುವ ಸಂದೇಶ ನೀಡಿದ್ದಾನೆ, ಅದರಂತೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಅದಕ್ಕೆ ಅವರಿಗೆ ಶ್ರೀಕೃಷ್ಣ ಪರಮಾತ್ಮ ಮತ್ತು ತಾಯಿ ಮೂಕಾಂಬಿಕೆ ಶಕ್ತಿ ಕೊಡಲಿ, ದುಷ್ಟರ ಸಂಹಾರವಾಗಬೇಕು‌. ಭಾರತ ಶಾಂತಿಯುತವಾಗಬೇಕು ಎಂದು ರೆಡ್ಡಿ ಆಶಿಸಿದರು.ನಂತರ ಜನಾರ್ದನ ರೆಡ್ಡಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ