ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಈಗಿರುವ ಕೆಲವೇ ಸಿ.ಎನ್.ಜಿ. ಸ್ಥಾವರಗಳಲ್ಲಿ ಅನಿಲ ಕೊರತೆಯಿಂದಾಗಿ ಆಟೋ ರಿಕ್ಷಾ ಚಾಲಕರು ಮತ್ತು ಇತರ ಸಿ.ಎನ್.ಜಿ ವಾಹನಗಳು ಇಂಧನದ ಕೊರತೆಯಿಂದಾಗಿ ಕಿ.ಮೀ.ವರೆಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಮತ್ತು ಅದರಿಂದ ಉಂಟಾಗುವ ಟ್ರಾಫಿಕ್ ವ್ಯವಸ್ಥೆಯ ಬಗ್ಗೆಯೂ ಗಂಭೀರವಾಗಿ ಗಮನಿಸಬೇಕೆಂದು ಗಮನ ಸೆಳೆದಿದ್ದರು.
ಅದರಂತೆ ಕೇಂದ್ರ ಸಚಿವಾಲಯದ ಸೂಚನೆಯಂತೆ, ಉಡುಪಿ ಜಿಲ್ಲೆಯ ಸಿಎನ್ಜಿ ಇಂಧನ ಪೂರೈಕೆದಾರರಾದ ಅದಾನಿ ಸಂಸ್ಥೆಯು ವಿಪಕ್ಷ ನಾಯಕರಿಗೆ ಪತ್ರ ಬರೆದು, ತುರ್ತಾಗಿ ಈ ಸಮಸ್ಯೆ ಬಗೆಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಶ್ವತವಾಗಿ ಸಿ.ಎನ್.ಜಿ. ಕೊರತೆ ನಿವಾರಿಸಲು ಹಿರಿಯಡ್ಕ, ಹೆಬ್ರಿ, ಮತ್ತು ಮುಳ್ಳಿಕಟ್ಟೆಯಲ್ಲಿ ನೂತನ ಸ್ಥಾವರ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸ್ಥಾವರಗಳನ್ನು ನಿರ್ಮಿಸಿ ಸಮಯಕ್ಕೆ ಸರಿಯಾಗಿ ಅನಿಲ ಪೂರೈಕೆ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.