ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ
ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕಾಫಿ ಬೆಳೆ ಉತ್ತಮ ಲಾಭದಾಯಕ ಬೆಳೆಯಾಗಿದೆ ಎಂದು ಕೊಪ್ಪ ಕಾಫಿ ಬೋರ್ಡನ ಹಿರಿಯ ರೈಸೋನ್ ಅಧಿಕಾರಿ ಡಾ.ಪ್ರಭುಗೌಡ ಹೇಳಿದರು.
ತಾಲೂಕಿನ ನೆಮ್ಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾವರಣದಲ್ಲಿ ನಡೆಯುತ್ತಿರುವ ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆ ವೈಜ್ಞಾನಿಕ ವಿಧಾನಗಳ ಕುರಿತು ವಿಚಾರ ಸಂಕಿರಣ, ಸಂವಾದ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.ಕಾಫಿ ಬೆಳೆ ನಮ್ಮ ದೇಶಿಯ ಬೆಳೆಯಲ್ಲ. ವಿದೇಶಿ ಬೆಳೆಯಾದ ಕಾಫಿ ಇಥಿಯೋಪಿಯದಲ್ಲಿ ಹುಟ್ಟಿದ್ದು ಕ್ರಿ.ಶ 16 ನೇ ಶತಮಾನದಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟಿತು. ನಮ್ಮ ರಾಜ್ಯದ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ಉಗಮಿಸಿತು ಎಂಬ ಇತಿಹಾನವಿದೆ. ಅರೇಬಿಕಾ ಕಾಫಿ ಇಥಿಯೋಪಿಯಾದಲ್ಲಿ, ರೋಬಾಸ್ಟಿಕಾ ಕಾಫಿ ಕಾಂಗೋ ದೇಶದಲ್ಲಿ ಹುಟ್ಟಿತು. ನಮ್ಮ ದೇಶದಲ್ಲಿ ಇವೆರೆಡು ತಳಿಗಳನ್ನು ಬೆಳೆಯಲಾಗುತ್ತಿದೆ. ನಮ್ಮ ರಾಜ್ಯವಲ್ಲದೇ ನೆರೆಯ ಕೇರಳ, ತಮಿಳುನಾಡು, ಆಂದ್ರ, ಒರಿಸ್ಸಾಗಳಲ್ಲಿಯೂ ಕಾಫಿ ಬೆಳೆ ಬೆಳೆಯಲಾಗುತ್ತಿದೆ.
8 ಶ್ರೀ ಚಿತ್ರ 2-
ಶೃಂಗೇರಿ ನೆಮ್ಮಾರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಯ ವೈಜ್ಞಾನಿಕ ವಿಧಾನಗಳ ಕುರಿತ ವಿಚಾರ ಸಂಕೀರಣ-ಸಂವಾದ ಗೋಷ್ಠಿಯನ್ನು ಕೃಷಿಕ ಮಹೇಶ್ ಮಾತೋಳ್ಳಿ ಉದ್ಘಾಟಿಸಿದರು.