ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನ ಬಡದಾಳ, ಬಂದರವಾಡ, ಮಣೂರ, ಕರ್ಜಗಿ, ನಂದರಗಾ, ದೇಸಾಯಿ ಕಲ್ಲೂರ, ಹಸರಗುಂಡಗಿ ಸೇರಿದಂತೆ 28 ಗ್ರಾಪಂಗಳ ಪೈಕಿ 12 ಗ್ರಾಪಂಗಳಲ್ಲಿ ಮನೆಗಳ ಹಂಚಿಕೆ ಹೆಸರಿಲ್ಲಿ ಹಣ ವಸೂಲಾತಿ ಬಹಳ ಜೋರಾಗಿ ನಡೆಯುತ್ತಿದೆ. ಯಾವುದೇ ಗ್ರಾಮ ಸಭೆ ನಡೆಸದೆ, ಪಿಡಿಒ, ತಾ.ಪಂ ಇಒ ಅವರ ಗಮನಕ್ಕಿಲ್ಲದೆ ಶಾಸಕರ ಬೆಂಬಲಿಗರು ಮನೆಗಳ ಹಂಚಿಕೆಗೆ ಇಳಿದಿದ್ದಾರೆ. ಬಿಪಿಎಲ್ ಕಾರ್ಡದಾರರಿಗೂ ಮನೆಗಳಿಲ್ಲ ಯಾರು ಹಣ ನೀಡುತ್ತಾರೋ ಅವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ಮನೆಗೆ 20 ಸಾವಿರದಂತೆ ಹಣ ವಸೂಲಿ ಮಾಡಲಾಗುತ್ತಿದ್ದು ಇದು ಅಂದಾಜು 5 ಕೋಟಿಯಷ್ಟು ಹಗರಣವಾಗಿದೆ. ಈ ಹಗರಣದಲ್ಲಿ ಶಾಸಕ ಎಂ.ವೈ ಪಾಟೀಲ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೂ ಪಾಲು ಹೋಗಲಿದೆ ಎಂದ ಅವರು ಈ ಹಗರಣ ಸಂಬಂಧ ಪಟ್ಟಂತೆ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದರೂ ಕೂಡ ಅಧಿಕಾರಿಗಳು ನಿಸ್ಸಾಯಕರಾಗಿದ್ದಾರೆ. ಅಧಿಕಾರದ ಮದದಲ್ಲಿ ಶಾಸಕರು ಮತ್ತು ಅವರ ಚೇಲಾಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಇನ್ನೊಂದು ಕಡೆ ಪಿಡ್ಬ್ಲೂಡಿ ಇಲಾಖೆಯಿಂದ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿ ಹೆಸರಿನಲ್ಲಿ ಸುಮಾರು 2 ಕೋಟಿಯಷ್ಟು ಅನುದಾನದ ದುರ್ಬಳಕೆ ಮಾಡಿ ನುಂಗಿ ಹಾಕಲಾಗಿದೆ. ಈ ಎರಡು ಪ್ರಕರಣಗಳ ಸಮಗ್ರ ತನಿಖೆ ನಡೆಯಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಶಾಸಕರ ವಿರುದ್ದ, ಸರ್ಕಾರದ ವಿರುದ್ದ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಮೀಲ ಗೌಂಡಿ, ರಾಜು ಉಕ್ಕಲಿ, ಶ್ರೀಶೈಲ್, ನಿಂಗು ಹೂಗಾರ ಇದ್ದರು.