ಪಡಿತರ ಅಂಗಡಿ ಮಾಲೀಕರಿಗೆ ಕೆ2 ಮೂಲಕ ಕಮೀಷನ್‌

KannadaprabhaNewsNetwork |  
Published : Aug 05, 2026, 01:15 AM IST
ಫೋಟೋ 4ಪಿವಿಡಿ54ಪಿವಿಜಿ5ಪಾವಗಡ,ಸರ್ಕಾರಿ ನ್ಯಾಯಬೆಲೆ ಅಂಗಡಿ ಟ್ರೈಲರ್‌ ಬಿಡುಗಡೆ ಸಮಾರಂಭದ ಹಿನ್ನಲೆಯಲ್ಲಿ ಕನ್ನಡದ ನಟಿ ಹಾಗೂ ತುಪ್ಪದ ಬೆಡಗಿ ಎಂದು ಖ್ಯಾತರಾಗಿದ್ದ ನಾಯಕಿ ನಟಿ ರಾಗಿಣಿ ಹಾಗೂ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾದ ಟಿ.ಕೃಷ್ಣಪ್ಪ ಇತರೆ ಗಣ್ಯರು ಭೇಟಿ ನೀಡಿ ಭಾಗವಹಿಸಿದ್ದರು. | Kannada Prabha

ಸಾರಾಂಶ

ಸಂಘದ ಹೋರಾಟದ ಫಲವಾಗಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪಡಿತರ ವಿತರಕರಿಗೆ ಸರ್ಕಾರದ ಕೆ2 ಮೂಲಕವೇ ಕಮೀಷನ್‌ ಜಮೆಯಾಗಲಿದೆ ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ ಸಂಘದ ಹೋರಾಟದ ಫಲವಾಗಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪಡಿತರ ವಿತರಕರಿಗೆ ಸರ್ಕಾರದ ಕೆ2 ಮೂಲಕವೇ ಕಮೀಷನ್‌ ಜಮೆಯಾಗಲಿದೆ ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು. ಮಂಗಳವಾರ ಪಟ್ಟಣದ ಅಲಂಕಾರ ಚಿತ್ರ ಮಂದಿರದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನ್ಯಾಯಬೆಲೆ ಅಂಗಡಿಗೆ ಬರುವ ಪಡಿತರರಿಂದ ಯಾವುದೇ ಕಾರಣಕ್ಕೂ ಒತ್ತಡವೇರಿ ಹಣ ಪಡೆಯಬೇಡಿ.ಕಮಿಷನ್‌ ಕಡಿಮೆ ಎಂದರೆ ನಮ್ಮ ಸಂಘಟನೆ ಇದೆ. ಸಂಘದ ಹೋರಾಟದ ಫಲವಾಗಿ ಇಂದು ರಾಜ್ಯದ ಜನತೆಗೆ ತಲಾ 10ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಪಡಿತರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ, ವಂಚನೆ ಅಗದೆ ಸರಿಯಾಗಿ ತೂಕ ಹಾಕಿ ಆಹಾರ ಪದಾರ್ಥಗಳನ್ನು ವಿತರಿಸುವಂತೆ ಕರೆ ನೀಡಿದರು.

ಇನ್ನೂ ಮುಂದೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ ಕಚೇರಿಗೆ ಹೋಗುವ ಅಗತ್ಯವಿಲ್ಲ. 10ದಿನದ ಒಳಗೆ ನೇರವಾಗಿ ಕೆ 2ಮೂಲಕ ನಿಮ್ಮ ಖಾತೆಗೆ ಕಮಿಷನ್‌ ಜಮಾವಾಗಲಿದೆ.ಇಡೀ ದೇಶದಲ್ಲಿ ಇಂತಹ ಅತ್ಯುತ್ತಮ ಕೆಲಸ ಎಲ್ಲೂ ಯಾರು ಮಾಡಿಲ್ಲ. ಸಮಸ್ಯೆ ಎನೇ ಇದ್ದರೂ ನಿರ್ವಹಣೆ ಮಾಡಿಕೊಡುವ ಭರವಸೆ ಅವರು ವ್ಯಕ್ತಪಡಿಸಿದರು.ನಟಿ ರಾಗಿಣಿ ಮಾತನಾಡಿ, ಸರ್ಕಾರದ ನ್ಯಾಯಬೆಲೆ ಅಂಗಡಿ ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶವಿದೆ. ವಿತರಕರು ಹಾಗೂ ಪಡಿತರರ ಸಮಸ್ಯೆಯ ಬಗ್ಗೆ ಮಾಹಿತಿ ಇದ್ದು ಎಲ್ಲರೂ ಈ ಸಿನಿಮಾ ವೀಕ್ಷಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ನಿಸಿಮಾ ನಿರ್ಮಾಪಕರಾದ ಬಾಮಾ ಹರೀಶ್, ಚೆಲುವಮೂರ್ತಿ,ತಾಲೂಕು ಅಧ್ಯಕ್ಷರಾದ ನಾಗರಾಜು, ಬೆಂಗಳೂರು ಗ್ರಾಮಾ೦ತರ ಅಧ್ಯಕ್ಷರಾದ ಲಕ್ಷ್ಮಣ ಗೌಡ್ರು, ಕಾರ್ಯದರ್ಶಿ ರಾಮಕೃಷ್ಣಪ್ಪ, ಗೊವಿಂದರೆಡ್ಡಿ, ಪ್ರಕಾಶಪ್ಪ,ಸುಬ್ಬರಾಯಪ್ಪ,ಯತೀಶ್ ಕುಮಾರ್, ನಾಗರಾಜು, ಯೋಗಿಶ್, ಸೂರಪ್ಪ,ಲಿಂಗದಹಳ್ಳಿ ಕದುರಪ್ಪ,ಓಬಳಾಪುರ ಲಿಂಗಮೂರ್ತಿ,ಸುಬ್ರಮಣಿ, ಹಾಗೂ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ್ದನ್ನು ವಿರೋಧಿಸಿ ನಾಳೆ ಬಂದ್
ಅಂಡರ್‌ ಪಾಸ್‌ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ