ಉಚಿತ ಮ್ಯಾಟ್ ಕುಸ್ತಿ ತರಬೇತಿ ಶಿಬಿರದ ಸಮಾರೋಪ

KannadaprabhaNewsNetwork |  
Published : Aug 26, 2025, 01:04 AM IST
23ಕೆಎಂಎನ್ ಡಿ17 | Kannada Prabha

ಸಾರಾಂಶ

ವಿವಿಧ ಗ್ರಾಮಗಳಿಂದ ಕಳೆದ 12 ದಿನಗಳಿಂದ ಬಾಲಕರು, ಬಾಲಕಿಯರು ಸೇರಿದಂತೆ ಹಲವು ಯುವ ಕುಸ್ತಿ ಪಟುಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪೋಶಕಾಂಶ ನೀಡುವ ಆಹಾರ, ಮೊಟ್ಟೆ ಸೇರಿದಂತೆ ಇತರ ದೇಹಕ್ಕೆ ಪುಷ್ಠಿಯಾಗುವ ಆಹಾರ ನೀಡಿ ಉತ್ತಮ ತರಬೇತಿ ಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಉಚಿತ ಮ್ಯಾಟ್ ಕುಸ್ತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕುಸ್ತಿ ತರಬೇತಿ ನೀಡಿದ ಶ್ರೀನಿವಾಸ್‌ಗೌಡ ಮಾತನಾಡಿ, ವಿವಿಧ ಗ್ರಾಮಗಳಿಂದ ಕಳೆದ 12 ದಿನಗಳಿಂದ ಬಾಲಕರು, ಬಾಲಕಿಯರು ಸೇರಿದಂತೆ ಹಲವು ಯುವ ಕುಸ್ತಿ ಪಟುಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪೋಶಕಾಂಶ ನೀಡುವ ಆಹಾರ, ಮೊಟ್ಟೆ ಸೇರಿದಂತೆ ಇತರ ದೇಹಕ್ಕೆ ಪುಷ್ಠಿಯಾಗುವ ಆಹಾರ ನೀಡಿ ಉತ್ತಮ ತರಬೇತಿ ಕೊಡಲಾಗಿದೆ ಎಂದರು.

ತರಬೇತಿ ಪಡೆದವರು ಈಗಾಗಲೇ ಹಲವು ಗ್ರಾಮಗಳಲ್ಲಿ ನಡೆಯುವ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಮುಂದಿನ ಅವರ ಭವಿಷ್ಯ ಉತ್ತಮ ಕ್ರೀಡಾ ಪಟುಗಳಾಗಿ ಹೆಸರು ತರಲಿ ಎಂದು ಹಾರೈಸಿದರು.

ಇದೇ ವೇಳೆ ತರಬೇತಿ ಪೋಷಕರು ಹಾಗೂ ಸಮಾಜ ಸೇವಕರಾದ ಡಾ.ಕೆ.ವೈ.ಶ್ರೀನಿವಾಸ್ಸ ಕ್ಯಾತನಹಳ್ಳಿ, ಶೀಲಾನಂಜುಂಡಯ್ಯ, ಎನ್. ಸರಸ್ವತಮ್ಮ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕೂಡಲಕುಪ್ಪೆ ಹೆಚ್. ಮಮತಾ ಮಹದೇವು ಅವರನ್ನು ಗೌರವಿಸಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಮೇಚೂರ್ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲುಸ್ವಾಮಿ, ಪಿ.ಬಾಲುಸುಬ್ರಮಣಿ, ಕಿರಂಗೂರು ಸುರೇಶ್, ಪಾಲಹಳ್ಳಿ ರವಿ, ಪೂಲೀಸ್ ಮಂಜು, ಪೈ.ರವಿ ನೀಗ್ರೊ, ಕರವೇ ಬಸವರಾಜು, ಪುರಸಭೆ ಮಾಜಿ ಸದಸ್ಯರಾದ ಟಿ.ಕೃಷ್ಣ ಸೇರಿದಂತೆ ಇತರರು ಇದ್ದರು.

ಶ್ರೀಮಹದೇಶ್ವರ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ನಗರದ ಹಾಲಹಳ್ಳಿ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ದೇವಾಲಯದ ಆವರಣದಲ್ಲಿ ಬಿದ್ದಿದ್ದ ಕಸವನ್ನು ಒಂದೆಡೆ ಕಲೆಹಾಕಿ ಅದನ್ನು ವಿಂಗಡಿಸಲಾಯಿತು. ಕಸದಲ್ಲಿರುವ ಗಾಜು, ಪ್ಲಾಸ್ಟಿಕ್‌ಗಳನ್ನು ವಿಂಗಡಿಸಿ ಅವುಗಳನ್ನು ತೆಗೆದುಕೊಂಡು ಹೋಗುವವರಿಗೆ ನೀಡಲಾಯಿತು. ಇನ್ನು ಕೊಳೆಯುವಂತಹ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ಸರ್ಕಾರವೇ ಹಿಂದೂ ಮದಿರಗಳನ್ನು ಗುಂಡಿ ತೋಡುತ್ತಿರುವಾಗ ಅವುಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಸಮಾಜದ್ದೇ ಆಗಿದೆ. ಹಾಗೆಯೇ ಇದೊಂದು ಪುಟ್ಟ ಪ್ರಯತ್ನವಾಗಿ ನಾವು ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದೇವೆ ಎಂದರು.

ಈ ಹಿನ್ನೆಲೆಯಲ್ಲಿ ಹಿಂದೂ ಸಮಾಜ ದೇವಾಲಯಗಳ ಜೊತೆಗೆ ನಿಂತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಯುವ ಬ್ರಿಗೇಡ್ ತಂಡದ ವತಿಯಿಂದ ದೇವಾಲಯದ ಆವರಣವನ್ನು ಸ್ವಚ್ಚಗೊಳಿಸುತ್ತಿದೇವೆ ಎಂದರು.

ಇದೇ ರೀತಿಯಲ್ಲಿ ಎಲ್ಲ ದೇವಾಲಯಗಳನ್ನೂ ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಎಲ್ಲರೂ ನಮ್ಮೊಡನೆ ಕೈಜೋಡಿಸಬಹುದು ಎಂದು ಮನವಿ ಮಾಡಿದರಲ್ಲದೆ, ತಾಲೂಕಿನ ದೇವಾಲಯದ ಸ್ವಚ್ಚತಾ ಕಾರ್ಯಕ್ಕೆ ನಮ್ಮನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಯುವ ಬ್ರಿಗೇಡ್‌ನ ಕಾರ್ಯಕರ್ತರಾದ ಪ್ರಸನ್ನಕುಮಾರ್ ಉಮಾಶಂಕರ್, ಬೆನಕ ಇತರರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಸಕ್ತರು ಯೋಗಿಶ್ ೯೬೮೬೬ ೧೯೬೬೯ ಶಿವಕುಮಾರ್ ೯೯೧೬೩೧೧೩೫೭ ಅವರನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ