- ಹರಿಹರ ತಾಲೂಕು ಶಿಕ್ಷಕರ ಸಹಕಾರ ಸಂಘ ವಾರ್ಷಿಕ ಸಭೆ- - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಗುರು ಭವನದಲ್ಲಿ ಸೋಮವಾರ ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಪತ್ತಿನ ಸಹಕಾರಿ ಸಂಘ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ಎಲ್ಲ ಷೇರುದಾರ ಶಿಕ್ಷಕರು ಪತ್ತಿನ ಸಹಕಾರಿ ಸಂಘದಲ್ಲಿ ನಿರಂತರ ವ್ಯವಹಾರವನ್ನು ಮಾಡಬೇಕು. ಆ ಮೂಲಕ ಶಿಕ್ಷಕರು ತಮ್ಮ ಆರ್ಥಿಕ ಅಗತ್ಯತೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದರು.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪ್ಯಾಟಿ ಮಾತನಾಡಿ, 2000ನೇ ವರ್ಷದಲ್ಲಿ ಕನಿಷ್ಟ ಮೊತ್ತದಲ್ಲಿ ಪ್ರಾರಂಭವಾದ ಸಂಘವು 2023-24 ನೇ ಸಾಲಿನಲ್ಲಿ ರೂ.5.80 ಕೋಟಿ ವ್ಯವಹಾರ ಮಾಡಿದೆ. ಇದೆಲ್ಲ ಸಾಧ್ಯವಾಗಿರುವುದು ಷೇರುದಾರ ಶಿಕ್ಷಕರ ಸಹಕಾರದಿಂದ. ಇನ್ನು ಮುಂದೆ ಷೇರುದಾರ ಶಿಕ್ಷಕರ ಮರಣೋತ್ತರ ನಿಧಿಯನ್ನು 5 ಸಾವಿರದಿಂದ ರೂ.10 ಸಾವಿರಕ್ಕೆ ಹಾಗೂ ಸಾಲ ಸೌಲಭ್ಯವನ್ನು 2 ಲಕ್ಷದಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಮೊಹಮ್ಮದ್ ಅಸ್ಲಂ, ಅಧೀಕ್ಷಕ ಸತೀಶ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಬೀರಪ್ಪ, ಕಾರ್ಯದರ್ಶಿ ವೈ.ಗದಿಗೆಪ್ಪ ಹಳೆಮನೆ, ಸಂಘದ ಉಪಾಧ್ಯಕ್ಷೆ ಎಸ್. ಸುನೀತಾ ಹಾಗೂ ನಿರ್ದೇಶಕರು ಷೇರುದಾರ ಶಿಕ್ಷಕರು ಭಾಗವಹಿಸಿದ್ದರು.
- - - -ಫೋಟೋ:ಹರಿಹರದಲ್ಲಿ ಸೋಮವಾರ ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಬಿಇಒ ಡಿ.ದುರುಗಪ್ಪ ಉದ್ಘಾಟಿಸಿದರು.