ಮಳ್ಳಿ ಗ್ರಾಮದಲ್ಲಿ ಎತ್ತಿನ ಬಂಡಿ ಹತ್ತಿ ಕಾಂಗ್ರೆಸ್‌ ಬಿರುಸಿನ ಪ್ರಚಾರ

KannadaprabhaNewsNetwork |  
Published : Apr 27, 2024, 01:00 AM IST
ಅರಳಗುಂಡಗಿ 1 ಮತ್ತು ಅರಳಗುಂಡಗಿ 2ಅರಳಗುಂಡಗಿಯಲ್ಲಿ ಗುರುವಾರ ನಡೆದ ರಾಧಾಕೃಷ್ಣ ಪರ ಮತ ಯಾಚನೆ ಸಭೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರು, ಶಾಸಕರಾದ ಡಾ. ಅಜಯ್‌ ಸಿಂಗ್‌, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌, ಅಭ್ಯರ್ಥಿ ರಾಧಾಕೃಷ್ಣ ಇದ್ದರು. | Kannada Prabha

ಸಾರಾಂಶ

ಬಿಜೆಪಿಗರು ಈಗ ಮತ್ತೆ ಮತ ಕೇಳಲು ಬರುತ್ತಿದ್ದಾರೆ. ಅವರ ಸುಲ್ಳುಗಳನ್ನು ನಂಬಬೇಡಿರಿ, ಕಾಂಗ್ರೆಸ್‌ 5 ಗ್ಯಾರಂಟಿ ಮೂಲಕ ಜನರ ಹಿತ ಕಾಪಾಡುತ್ತಿದೆ. ಕಾಂಗ್ರೆಸ್‌ ಕೈ ಬಲಪಡಿಸಲು ನಿಮ್ಮ ಮತ ಹಾಕಿ: ಅಜಯ್‌ಸಿಂಗ್‌

ಕನ್ನಡಪ್ರಭ ವಾರ್ತೆ, ಜೇವರ್ಗಿ/ಯಡ್ರಾಮಿ

ಕಳೆದ ಬಾರಿ ಚುನಾವಣೆಯಲ್ಲಿ ನಿಮ್ಮ ಮತದಂದಿಗೆ ಗೆದ್ದು ಬಂದು ದೆಹಲಿ ಸೇರಿದ್ದ ಬಿಜೆಪಿಯ ಸಂಸದರು ಎಲ್ಲರು ಜಿಲ್ಲೆ, ರಾಜ್ಯದ ಪರ ಸಣ್ಣ ಕೆಲಸ ಸಹ ಮಾಡಿಲ್ಲ, ನಮ್ಮ- ನಿಮ್ಮೆಲ್ಲರ ಹಿತ ಕಾಪಾಡಲು ಯಾವುದೂ ಕ್ರಮಕ್ಕೆ ಮುಂದಾಗಿಲ್ಲ. ಮೋದಿ ನಾಮ ಬಲದಿಂದಲೇ ಗೆದ್ದವರು ನಿಮಗಾಗಿ ಕೆಲಸ ಮಾಡಲು ಸಾಧ್ಯವೆ? ಬಿಜೆಪಿಗರು ಈಗ ಮತ್ತೆ ಮತ ಕೇಳಲು ಬರುತ್ತಿದ್ದಾರೆ. ಅವರ ಸುಳ್ಳುಗಳನ್ನು ನಂಬಬೇಡಿರಿ, ಕಾಂಗ್ರೆಸ್‌ 5 ಗ್ಯಾರಂಟಿ ಮೂಲಕ ಜನರ ಹಿತ ಕಾಪಾಡುತ್ತಿದೆ. ಕಾಂಗ್ರೆಸ್‌ ಕೈ ಬಲಪಡಿಸಲು ನಿಮ್ಮ ಮತ ಹಾಕಿರಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಜನತೆಗೆ ಕರೆ ನೀಡಿದರು.

ಮಳ್ಳಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಹುರಿಯಾಳು ರಾಧಾಕೃಷ್ಣ ಪರವಾದ ಮತ ಯಾಚನೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಬಂದಾಗಿನಿಂದ ನಿಮೆಲ್ಲರ ತೆರಿಗೆ ಹಣ ನಿಮಗೇ ಸೇರುತ್ತಿದೆ. ತೆರಿಗೆ ಹಣ ಗ್ಯಾರಂಟಿ ರೂಪದಲ್ಲಿ ಮತ್ತೆ ಜನರಿಗೆ ತಲುಪುತ್ತಿದೆ. ಆದರೆ, ನಮ್ಮ ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗ್ಯಾರಂಟಿ ಹಣದಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆಯೇ ಹೊರತು ಅವರ್ಯಾರು ದಾರಿ ತಪ್ಪಿಲ್ಲ. ಇಂತಹ ಕೀಳು ಹೇಳಿಕೆ ಕೊಡಲು ಬಿಜೆಪಿ, ಜೆಡಿಎಸ್‌ ಮೈತ್ರಿ ನಾಯಕರಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ, ಸೋಲಿನ ಹತಾಶೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆಂದು ದೂರಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡುವ‌ ಮೂಲಕ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ ಡಾ. ಅಜಯ್‌ ಸಿಂಗ್‌ ಮುಂದಿನ ನಾಲ್ಕು ವರ್ಷದಲ್ಲಿ ಜೇವರ್ಗಿ ಸರ್ವತೋಮುಖ ಪ್ರಗತಿ ತಮ್ಮ ಜವಾಬ್ದಾರಿ ಎಂದರು.

ಯಡ್ರಾಮಿ ತಾಲೂಕಿನ ಮಳ್ಳಿಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಅದ್ದೂರಿ ಮೆರವಣಿಗೆ ನಡೆಯಿತು. ಎತ್ತಿನ ಬಂಡಿಯಲ್ಲಿ ಅವರನ್ನು ನಿಲ್ಲಿಸಿ ಊರವರು ಭಿಮಾನ ಮೆರೆದರು. ಮಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೃಹತ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜನ ಕಿಕ್ಕಿರಿದು ಸೇರಿತ್ತು.

ನಂತರ ಹರವಾಳ , ಯಡ್ರಾಮಿ ತಾಲೂಕಿನ ಅರಳಗುಂಡಗಿ ಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೃಹತ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು

ಈ ಸಂದರ್ಭದಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಕಾಂಗ್ರೆಸ್‌ ಹುರಿಯಾಳು ರಾಧಾಕೃಷ್ಣ ದೊಡ್ಮನಿ, ಪಕ್ಷದ ಹಿರಿಯ ಮುಖಂಡರಾದ ರಾಜಶೇಖರ್ ಸೀರಿ, ವಸಂತ ನರಿಬೋಳ, ಭೀಮರಾಯ ಅವಧಾನಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರುಕ್ಕು ಪಟೇಲ್‌ ಇಜೇರಿ, ಸಿದ್ದಲಿಂಗ ರೆಡ್ಡಿ ಇಟಗಿ, ಮಲ್ಲನಗೌಡ ಹರವಾಳ್, ಶರಣಬಸಪ್ಪ ಹರವಾಳ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

15 ಸಾವಿರಕ್ಕೂ ಹೆಚ್ಚು ಲೀಡ್‌: ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್‌ ಸಿಂಗ್‌ ಈ ಬಾರಿ ಜೇವರ್ಗಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯಲ್ಲಿ 15 ಸಾವಿರಕ್ಕೂ ಹೆಚ್ಚು ಲೀಡ್‌ ಕೊಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಜೇವರ್ಗಿ ವ್ಯಾಪ್ತಿಯಲ್ಲಿ 4 ಬೃಹತ್‌ ಸಮಾವೇಶಗಳಾಗಿವೆ. ಜಿಪಂ ಕ್ಷೇತ್ರ ಹಂತದಲ್ಲಿಯೂ ಪ್ರಚಾರಗಲು ಸಾಗಿವೆ. ಅಭ್ಯರ್ಥಿ ಜೊತೆಗೂ ಜೇವರ್ಗಿಯಲ್ಲಿ ಪ್ರಚಾರ ಬಿರುಸಿನಿಂದ ಸಾಗಿದೆ. ಜೇವರ್ಗಿ ಜನತೆ ಈ ಬಾರಿ ಖರ್ಗೆಯವರ ಕೈ ಬಲಪಡಿಸಲು ನಿರ್ಧರಿಸಿದ್ದಾರೆ. ಹೆಚ್ಚಿನ ಲೀಡ್‌ ಜೇವರ್ಗಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸಿಗಲಿದೆ ಎಂದು ವಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ