ಆಪರೇಷನ್ ಸಿಂದೂರ ಯಶಸ್ಸು ಸಹಿಸದ ಕೈ । ಬಹಿರಂಗವಾಗಿ ಕ್ಷಮೆ ಕೋರಲು ಆಗ್ರಹ
ಆಪರೇಷನ್ ಸಿಂದೂರ ಯಶಸ್ಸಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ಸಹಿಸದ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಮಂತ್ರಿ ಮಂಡಲದವರು ನಮ್ಮ ಯೋಧರು, ಸೇನೆ, ಸಶಸ್ತ್ರದ ಬಗ್ಗೆಯೇ ಅನುಮಾನಪಡುತ್ತಿರುವುದು ಕಳವಳಕಾರಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಪರೇಷನ್ ಸಿಂದೂರದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೂ, ರಾಹುಲ್ ಗಾಂಧಿ, ಖರ್ಗೆ, ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಸಚಿವರು ಭಾರತ ಸೇನೆಯ ಯಶಸ್ಸಿನ ಬಗ್ಗೆಯೂ ಅನುಮಾನಪಡುತ್ತಿದ್ದಾರೆ. ಈ ಕಾಂಗ್ರೆಸ್ಸಿಗರು ಭಾರತ ಪರವೋ ಅಥವಾ ಶತೃ ರಾಷ್ಟ್ರ ಪಾಕಿಸ್ತಾನದ ಪರವೋ ಎಂಬುದನ್ನು ಜನರ ಮುಂದೆ ಬಹಿರಂಗಪಡಿಸಲಿ ಎಂದರು.ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಓಡಾಡುತ್ತಾರೆ. ಇಂತಹವರು ದೇಶದ ಪರವಾಗಿ ನಿಲ್ಲುವ ಬದಲಿಗೆ ಪಾಕಿಸ್ಥಾನದ ಪರ ಮಾತನಾಡುತ್ತಾರೆಂದರೆ, ಇವರು ಪಾಕ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆಯಲೆಂದೇ ಹೀಗೆಲ್ಲ ಮಾತನಾಡುತ್ತಿದ್ದಾರೇನೋ ಎಂಬ ಪ್ರಶ್ನೆ ಕಾಡುತ್ತದೆ. ರಾಹುಲ್, ಖರ್ಗೆ, ಸಿದ್ದರಾಮಯ್ಯ,ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಬಿ.ಕೆ.ಹರಿಪ್ರಸಾದ್ ಮೊದಲಾದವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿದರು.
ಹೊಸಪೇಟೆಯಲ್ಲಿ ನಡೆದಿದ್ದು ರಾಜ್ಯ ಸರ್ಕಾರದ ಸಾಧನಾ ಸಮಾವೇಶವಲ್ಲ. ಜನರ ಸಮಾಧಿ ಮೇಲೆ ಮಾಡಿದ ಸಮಾವೇಶ, ಅದೊಂದು ಲೂಟಿ ಸಮಾವೇಶವಾಗಿದ್ದು, ಅಧಿಕಾರ ನಡೆಸುವ ನಡೆಸುವ, ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಸಹ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಉಚ್ಚಾಟನೆಗೆ ದಾವಣಗೆರೆ ಸೂತ್ರದಾರ ಕಾರಣ!
ಬಿಜೆಪಿಯಿಂದ ಉಚ್ಛಾಟಿದ ಬಸನಗೌಡ ಪಾಟೀಲ್ ಯತ್ನಾಳ್ ದಾವಣಗೆರೆಗೆ ಬಂದಾಗ ಜಿಎಂಐಟಿಯಲ್ಲಿ ಆಶ್ರಯ ನೀಡಿದ್ದಲ್ಲದೇ, ಪತ್ರಿಕಾಗೋಷ್ಟಿ ಮಾಡಲು ಸಹ ಇದೇ ಸೂತ್ರದಾರರು ಕುಮ್ಮಕ್ಕು ನೀಡಿದ್ದಾರೆ. ಇಂತಹವರಿಂದಾಗಿಯೇ ಯತ್ನಾಳ್ ಈಗ ಬಲಿಪಶುವಾಗಿದ್ದಾರೆ ಎಂದರು.
ಯತ್ನಾಳ್ ಅಪ್ಪ-ಮಗನನ್ನು ಜೈಲಿಗೆ ಕಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರರನ್ನು ಜೈಲಿಗೆ ಕಳಿಸುವುದು ಯತ್ನಾಳ್ ಹಣೆಬರಹದಲ್ಲೇ ಇಲ್ಲ. ಯತ್ನಾಳ್ ನಮ್ಮ ನಾಯಕ ಯಡಿಯೂರಪ್ಪ ಕಾಲಿನ ಧೂಳಿಗೂ ಸಮನಲ್ಲ ಎಂದು ಲೇವಡಿ ಮಾಡಿದರು.
ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.