ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ಚಿಕ್ಕೋಡಿಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಅಯೋಗ್ಯರು ಅಂಬೇಡ್ಕರ್ ಪುಸ್ತಕ ಓದಿಲ್ಲ. ಮೊದಲು ಅವರ ಆ ಬುಕ್ ಓದಲಿ. ಅಂಬೇಡ್ಕರ್ ಎಂದೂ ಹಿಂದೂ ವಿರೋಧಿ, ದೇಶದ್ರೋಹಿ ಆಗಿರಲಿಲ್ಲ. ಈ ಕಳ್ಳರೆಲ್ಲಾ ಸೇರಿ ಅಂಬೇಡ್ಕರ್ ಫೋಟೋ ಹಾಕುತ್ತಾರೆ. ಈ ಜಿಲ್ಲೆಯಲ್ಲೂ ಕೆಲವರು ರಾಜಕೀಯ ಮಾಡುತ್ತಾರೆ. ಅಂಬೇಡ್ಕರ್ ಹೆಸರಿನಲ್ಲಿ ಸ್ಮಶಾನದಲ್ಲಿ ಹೋಗಿ ಪೂಜೆ ಮಾಡುತ್ತಾರೆ. ಇವರು ಮೊದಲು ಅಂಬೇಡ್ಕರ್ ಪುಸ್ತಕ ಓದಲಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.ನಿಜಾಮನ ಬೇಡಿಕೆ ತಿರಸ್ಕರಿದ್ದ ಡಾ.ಅಂಬೇಡ್ಕರ್:
ಡಾ.ಅಂಬೇಡ್ಕರ್ ಅವರಿಗೆ ಹೈದ್ರಾಬಾದ್ ನಿಜಾಮ್ ಇಸ್ಲಾಂ ಸೇರಿದರೆ ಅರ್ಧ ಆಸ್ತಿ ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದ. ಆದರೆ, ಡಾ.ಬಾಬಾಸಾಹೇಬರು ನನ್ನ ಕುಟುಂಬದ ಉದ್ಧಾರಕ್ಕಾಗಿ ಇಂತಹ ಹೇಯ ಕೆಲಸ ಮಾಡಲ್ಲ. ಇಸ್ಲಾಂ ನಾನು ಸೇರಿದ್ರೂ ನಮ್ಮನ್ನ ಮತ್ತೆ ದಲಿತರ ಹಾಗೆ ಕಾಣುತ್ತಾರೆ. ಹಾಗಾಗಿ ಇಸ್ಲಾಂ ಸೇರಲ್ಲ ಎಂದು ನಿಜಾಮ್ ಕೊಟ್ಟ ಆಹ್ವಾನ ತಿರಸ್ಕರಿಸಿದ್ದರು. ಇಸ್ಲಾಂ ಸೇರಿದರೆ ಇಡೀ ದೇಶ ರಾಷ್ಟ್ರಾಂತರ ಆಗುತ್ತೆ. ಹಿಂದೂ-ಮುಸ್ಲಿಂ ಜಗಳ ಆಗಲಿದೆ. ಅದಕ್ಕೆ ನಾನು ಅವಕಾಶ ಕೊಡಲ್ಲ. ಬೌದ್ಧ ಧರ್ಮ ಭಾರತದಲ್ಲೇ ಜನ್ಮ ತಾಳಿದ ಧರ್ಮ. ಬೌದ್ಧ ಧರ್ಮ ಸ್ವೀಕಾರ ಮಾಡುತ್ತೇನೆಂದು ಬೌದ್ಧಧರ್ಮಕ್ಕೆ ಸೇರಿದರು ಎಂದು ಹೇಳಿದರು.ದೇಶ ಒಡೆದು ಪಾಕಿಸ್ತಾನ ಕೊಡುವುದಕ್ಕೂ ಡಾ.ಅಂಬೇಡ್ಕರ್ ವಿರೋಧ ಮಾಡಿದ್ದರು. ಪಾಕಿಸ್ತಾನ ದೇಶ ಕೊಟ್ರೆ ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ, ಇಲ್ಲಿರುವ ಮುಸ್ಲಿಮರನ್ನು ಅಲ್ಲಿಗೆ ಕಳುಹಿಸಿ. ಇಸ್ಲಾಂ ಧರ್ಮದಲ್ಲಿ ಸಹೋದರತ್ವ ಭಾವನೆ ಇಲ್ಲ. ಇವರು ಎಲ್ಲಿಯವರೆಗೆ ಭೂಮಿ ಮೇಲೆ ಇರುತ್ತಾರೋ ಗದ್ದಲ ಮಾಡುತ್ತಲೇ ಇರುತ್ತಾರೆ ಎಂದರು.
ಕನ್ಹೇರಿ ಶ್ರೀಗಳ ಹೇಳಿಕೆ ಸಮರ್ಥಿಸಿದ ಯತ್ನಾಳ:
ಡಿ.9ರೊಳಗೆ ಮೀಸಲಾತಿ ಘೋಷಿಸದಿದ್ರೆ ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ:
ಬುಧವಾರ ಪಟ್ಟಣದ ಬಸವಶ್ರೀ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುಂದಾಳತ್ವದಲ್ಲಿ ನಡೆದ 4 ವರ್ಷಗಳ ಅವಿರತ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರ 2ಡಿ ಮಿಸಲಾತಿ ನೀಡಿತ್ತಾದರೂ ಅದು ಈವರೆಗೂ ಜಾರಿಯಾಗಿಲ್ಲ. ಎಲ್ಲರ ಬೇಡಿಕೆಗೆ ಸ್ಪಂದಿಸುತ್ತಿರುವ ಸಿದ್ದರಾಮಯ್ಯನವರು ನಮಗೆ ಮಾತ್ರ ನೀತಿ ಸಂಹಿತೆ ಪಾಠ ಹೇಳುವುದು ಯಾವ ನ್ಯಾಯ? ಸಮಾಜದ ರೈತರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಒಗ್ಗಟ್ಟಿನಿಂದ ನಮ್ಮ ಬೇಡಿಕೆ ಈಡೇರಿಕೆಗೆ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ಗಳ ಸಮೇತ ಹಾಕಲು ಸಿದ್ದರಾಗಿ ಎಂದು ಕರೆ ನೀಡಿದರು.