ಕನ್ನಡಪ್ರಭ ವಾರ್ತೆ ಕಿಕ್ಕೇರಿ
ತುಳಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರಸ್ವಾಮಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದ ಶಾಸಕರು ಅನುದಾನವನ್ನು ಕಷ್ಟಪಟ್ಟು ಪಡೆದು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಇನ್ನಷ್ಟು ಅಭಿವೃದ್ಧಿಗಾಗಿ ಕ್ಷೇತ್ರದ ಜನರು ಶಾಸಕ ಎಚ್.ಟಿ.ಮಂಜು ಕೈ ಬಿಡದೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಎಂದರು.
ತಾನು ಸದಾ ಶಾಸಕರೊಂದಿಗೆ ಇರುತ್ತೇನೆ. ಮುಂದಿನ ದಿನದಲ್ಲಿ ಉತ್ತಮ ಭವಿಷ್ಯ ಸಿಗಲಿದೆ. ಜಿಲ್ಲೆ, ತಾಲೂಕು ಜೆಡಿಎಸ್ ಭದ್ರ ನೆಲೆ ಎಂದು ಸದಾ ಸಾಬೀತುಪಡಿಸಿದ್ದೀರಿ. ನಿಮ್ಮೊಂದಿಗೆ ಕಷ್ಟ ಸುಖಗಳಿಗೆ ಸದಾ ಭಾಗಿಯಾಗುವೆ. ಮುಂದೆ ಖಂಡಿತವಾಗಿಯೂ ತಾಲೂಕು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದರು.ಜಿಲ್ಲೆಯ ಜನತೆ ದೇಶ ಕಟ್ಟುವ ಕೆಲಸಕ್ಕೆ ಸಹಕಾರ ನೀಡಿ ತಂದೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರಕ್ಕೆ ಕಳಿಸಿಕೊಟ್ಟಿದ್ದೀರಿ. ಜಿಲ್ಲೆಯ ಋಣ ತಮ್ಮಕುಟುಂಬದ ಮೇಲಿದೆ. ಎಂದೂ ಮರೆಯಲಾರೆವು ಎಂದರು.
ಮಾನಸಿಕ ನೆಮ್ಮದಿ, ಶಾಂತಿ, ಒಗ್ಗಟ್ಟಿಗೆ ಇಂತಹ ಸತ್ಕಾರ್ಯಗಳು ಮತ್ತಷ್ಟು ಹಮ್ಮಿಕೊಳ್ಳಬೇಕು. ಎಲ್ಲರ ಒಳಿತಿಗಾಗಿ ಆಧ್ಯಾತ್ಮಿಕ ಚಿಂತನೆ, ಪೂಜಾರಾಧನೆ ಮದ್ದಾಗಿದೆ. ಸಂಕಷ್ಟ ಪರಿಹಾರಕ್ಕಾಗಿ ಪೂಜೆ, ಹೋಮ ಹವನಾದಿಗಳನ್ನು ಪಾಲಿಸಿ ಎಂದರು.