ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಥಳೀಯ ನಾಯಕರು ಮತ್ತು ಸಮಾನ ಮನಸ್ಕ ಪಕ್ಷಗಳ ಸಹಕಾರ, ಆತ್ಮೀಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ನಿವೃತ್ತ ಅಧಿಕಾರಿ ಶಿವರುದ್ರಯ್ಯ ಸ್ವಾಮಿ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಇಬ್ಬರೂ ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿ ಕ್ಷೇತ್ರದ ಪ್ರಬುದ್ಧ ಮತದಾರರು ಹೊಸಮುಖದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಈ ಎರಡೂ ರಾಜಕೀಯ ಪಕ್ಷ ಹೊರತುಪಡಿಸಿ, ಮತ್ತೊಂದು ಪಕ್ಷಕ್ಕೆ ಚುನಾವಣೆ ಮಾಡುವ ಅಭ್ಯರ್ಥಿಗಳನ್ನು ನಿಲ್ಲಿಸುವ ಧೈರ್ಯ ಇಲ್ಲ. ಆದ್ದರಿಂದ ಈ ರಾಷ್ಟ್ರೀಯ ಪಕ್ಷಗಳ ಹುಸಿತನ, ಕುಟುಂಬ ರಾಜಕಾರಣ ಎದುರಿಸಲು ತೃತೀಯ ರಂಗದ ಭಾಗವಾಗಿ ಜನ ಪರಿವರ್ತನ ವೇದಿಕೆ ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಭಾರತೀಯ ಜನತಾದಳದ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ರೈತ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮಾಜದ ಹಲವಾರು ಸಂಘಟನೆಗಳು ನಾಯಕರು ಬೆಂಬಲ ನೀಡಿದ್ದಾರೆ.ರಾಜಕೀಯ ಎನ್ನುವುದು ಕೆಲವು ಕುಟುಂಬಗಳ ವ್ಯಾಪಾರ. ವಾಣಿಜ್ಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಈ ಕುಟುಂಬಗಳ ಹಿಡಿತದಲ್ಲಿವೆ. ಮತದಾರರನ್ನು ಈ ಕುಟುಂಬ ರಾಜಕಾರಣಿಗಳು ಪಕ್ಷಗಳ ಮುಖಾಂತರ ಅಮಾಯಕ ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸುತ್ತಿವೆ. ಪ್ರಚೋದನಾತ್ಮಕ ವಿಚಾರಗಳನ್ನು ಬಿತ್ತುತ್ತ ಅಮಾಯಕ ಕಾರ್ಯಕರ್ತರ ಹೆಣಗಳ ಮೇಲೆ ರಾಜಕಾರಣದ ಸವಾರಿ ಮಾಡುತ್ತಿದ್ದಾರೆ. ಯಾರು ಕುಟುಂಬ ರಾಜಕಾರಣ ವಿರೋಧಿಸಿದರೋ ಅವರೇ ಅವರ ಮಕ್ಕಳನ್ನು ಒಬ್ಬರ ನಂತರ ಒಬ್ಬರನ್ನು ರಾಜಕೀಯಕ್ಕೆ ತಂದು ತಮ್ಮ ರಾಜಕೀಯ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿ, ತಮ್ಮ ಆಸ್ತಿ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
- - - -14ಎಸ್ಎಂಜಿಕೆಪಿ02:ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಪಕ್ಷೇತರ ಅಭ್ಯರ್ಥಿ ಶಿವರುದ್ರಯ್ಯ ಸ್ವಾಮಿ ಮಾತನಾಡಿದರು.