ಹೊಸಕೋಟೆ: ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲ ವರ್ಗದ ಜನರ ಸಹಕಾರ, ಅಧಿಕಾರಿಗಳಿಗೆ ಅಗತ್ಯ ಎಂದು ತಾಪಂ ಇಒ ಡಾ. ನಾರಾಯಣಸ್ವಾಮಿ ತಿಳಿಸಿದರು.
ಪಿಡಿಒ ಮುನಿವೆಂಕಟಸ್ವಾಮಿ ಮಾತನಾಡಿ, ಸ್ವಚ್ಛ ಭಾರತದ ಪರಿಕಲ್ಪನೆ ಪ್ರಸ್ತುತ ದಿನಗಳಲ್ಲಿ ದೂರವಾಗಿದೆ. ಆದ್ದರಿಂದ ಸ್ವಚ್ಛತೆ ಎನ್ನುವುದು ನಮ್ಮ ಮನೆ ಮನಗಳಿಂದ ಬರಬೇಕು. ರಸ್ತೆಗಳಲ್ಲಿ ಕಸ ಎಸೆಯುದನ್ನ ಬಿಟ್ಟು ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಮನೆ ಬಾಗಿಲಿಗೆ ಬರುವ ಸ್ವಚ್ಛ ವಾಹಿನಿಗೆ ಕಸ ನೀಡಬೇಕು, ಇದರಿಂದ ಗ್ರಾಮಗಳ ನೈರ್ಮಲ್ಯ ಕಾಪಾಡಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಇನ್ಫೋಸಿಸ್ ಸಹಯೋಗದಲ್ಲಿ ಗ್ರಾಪಂಗೊಂದು ಮಾದರಿ ಶಾಲೆ ನಿರ್ಮಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು ವಾಗಟದಲ್ಲಿ ಸಹ ಮಾದರಿ ಶಾಲೆ, ನಿರ್ಮಾಣ ಆಗಲಿದೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಎಲ್ಕೆಜಿಯಿಂದ 10ನೇ ತರಗತಿವರೆಗೆ ಹೈಟೆಕ್ ಶಿಕ್ಷಣ ಲಭ್ಯವಾಗಲಿದೆ ಎಂದರು.ಗ್ರಾಪಂ ಅಧ್ಯಕ್ಷೆ ಅಮ್ಮಯ್ಯಮ್ಮ, ಸದಸ್ಯರಾದ ರಾಮಚಂದ್ರ, ಬಿಟಿ.ರವೀಶ್, ಕುಮಾರ್, ಸಿದ್ದಪ್ಪ, ರಾಮಮೂರ್ತಿ, ಮಾಕನಹಳ್ಳಿ ಡೈರಿ ಅಧ್ಯಕ್ಷ ರಮೇಶ್, ಪಿಡಿಒ ಮುನಿ ವೆಂಕಟಸ್ವಾಮಿ, ಕಾರ್ಯದರ್ಶಿ ಶಿವಶಂಕರಪ್ಪ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿ ಶ್ರೀನಿವಾಸ್, ಸಿಆರ್ಪಿ ಶ್ರೀನಿವಾಸ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಫೋಟೋ: 22 ಹೆಚ್ಎಸ್ಕೆ 1ಹೊಸಕೋಟೆ ತಾಲೂಕಿನ ವಾಗಟ ಗ್ರಾಪಂ ೨೦೨೫-೨೬ನೇ ಸಾಲಿನ ಗ್ರಾಮ ಸಭೆಯಲ್ಲಿ ವಿವಿಧ ಸವಲತ್ತುಗಳನ್ನು ತಾಪಂ ಇಒ ಡಾ.ನಾರಾಯಣಸ್ವಾಮಿ ವಿತರಿಸಿದರು.