ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ಬಳಗದಿಂದ ನಡೆದ ಒಂದು ದಿನದ ಹಳೆಯ ವಿದ್ಯಾರ್ಥಿಗಳ ಸಭೆ- ಮರು ಸಂಪರ್ಕಿಸಿ- ಪ್ರತಿಫಲಿಸಿ- ಮರುಜ್ಜೀವನಗೊಳಿಸಿ ವಿಶೇಷ ಉಪನ್ಯಾಸ- ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ- ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಭ್ರಷ್ಟಾಚಾರದ ವಿರುದ್ಧ ಲೋಕಾಯಕ್ತ ಸಂಸ್ಥೆ ಕಾರ್ಯಾಚರಣೆ ಮಾಡಿದಾಗ ಹಲವೆಡೆ ಲಂಚ ತೆಗೆದುಕೊಳ್ಳುವುದರಲ್ಲಿ ಹೆಂಗಸು ಹೆಚ್ಚು, ಗಂಡಸು ಹೆಚ್ಚು ಎನ್ನುವ ಹಾಗಿಲ್ಲ. ಇಬ್ಬರೂ ಭ್ರಷ್ಟಾಚಾರದಲ್ಲಿ ಎಲ್ಲರೂ ಸಮಾನರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ವಿದ್ಯಾರ್ಥಿನಿಯರು ಭ್ರಷ್ಟಾಚಾರ ತಡೆಯಲು ಅರಿವು ಹೆಚ್ಚಿಸಿಕೊಳ್ಳಬೇಕು. ಲಂಚ- ಭ್ರಷ್ಟಾಚಾರ ಎಂದರೆ ವೈಯಕ್ತಿಕವಾಗಿ ಒಬ್ಬ ಸರ್ಕಾರಿ ನೌಕರ ತನ್ನ ಸ್ವಂತಕ್ಕಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹೆಚ್ಚಿನ ಲಾಭ ಪಡೆಯಲಿಕ್ಕೋಸ್ಕರ ಸಂಬಳ ಪಡೆಯುತ್ತಿದ್ದರೂ ಹಣ ಪಡೆದರೆ ಅದು ಭ್ರಷ್ಟಾಚಾರ- ಲಂಚವಾಗುತ್ತದೆ ಎಂದು ವಿವರಿಸಿದರು.
ಹೆಣ್ಣು ಮಕ್ಕಳು ಆರ್ಥಿಕ ಶಿಸ್ತು ಕಲಿತುಕೊಳ್ಳುವುದು ಅತ್ಯವಶ್ಯಕ. ಆರ್ಥಿಕ ಶಿಸ್ತು ಇಲ್ಲದಿದ್ದರೆ ಹಣ ಉಳಿತಾಯ ಮಾಡಲಾಗದು. ನಮ್ಮ ಪೋಷಕರು ಎಷ್ಟು ಸಂಪಾದನೆ ಮಾಡುತ್ತಿದ್ದರು. ಎಷ್ಟು ಖರ್ಚು ಮಾಡಿ ಅದರಲ್ಲಿ ಎಷ್ಟು ಹಣ ಉಳಿಸುತ್ತಿದ್ದರು. ಇದರೊಂದಿಗೆ ಬದುಕನ್ನೂ ಕಟ್ಟಿಕೊಂಡು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ, ಈಗ ಅತಿ ಆಸೆಗೆ ಬಿದ್ದು, ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನೂ ಅರಿತುಕೊಳ್ಳಬೇಕು ಕಿವಿಮಾತು ಹೇಳಿದರು.
ನಾವೆಲ್ಲಾ ವ್ಯಾಸಂಗ ಮಾಡುತ್ತಿದ್ದಾಗ ಪುಸ್ತಕಗಳನ್ನು ಓದುತ್ತಿದ್ದವು. ಈಗ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದರಿಂದ ಒಳ್ಳೆಯದ್ದನ್ನೂ ಕಲಿಯಬಹುದು. ಜೊತೆಗೆ ಕೆಟ್ಟದ್ದನ್ನೂ ಪಡೆದುಕೊಳ್ಳಬಹುದು. ಆದರೆ, ಆಯ್ಕೆ ನಮ್ಮದಾಗಿದೆ ಎಂದರು.
ಕೆಲವು ಸರ್ಕಾರಿ ಕಚೇರಿಯಲ್ಲಿ ಪ್ರಮಾಣ ಪತ್ರ ಪಡೆಲು ಭೇಟಿ ನೀಡಿದಾಗ ನಿಮ್ಮಿಂದ ಕೆಲವುರು ನಿರೀಕ್ಷೆ ಮಾಡುತ್ತಾರೆ. ನಿಮಗೆ ತಾಳ್ಮೆಇಲ್ಲದೆ ಸಾಲಿನಲ್ಲಿ ನಿಂತು ಪಡೆಯದಿದ್ದಾಗ ಭ್ರಷ್ಟರು ಈ ಸನ್ನಿವೇಷಗಳನ್ನೇ ದುರಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಮೊದಲು ನಾವು ನಿಯಮಗಳನ್ನು ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವೇ ನಿಯಮಗಳನ್ನು ಪಾಲಿಸದಿದ್ದರೆ ಬೇರೆಯವರಿಗೆ ಏನೆಂದು ಹೇಳಲು ಸಾಧ್ಯ. ಪ್ರತಿಯೊಬ್ಬರೂ ನಿಯಮ ಪಾಲಿಸುವ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡು ಬೇರೆಯವರಿಗಿಂತ ಭಿನ್ನವಾಗಿ ಸಂವಹನವನ್ನೂ ಕಲಿಯಬೇಕು. ಆಗ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಅವರು - ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ವಿಷಯ ಕುರಿತು ಉಪನ್ಯಾಸ ನೀಡಿದರು. ಬಳಿಕ ಗಣ್ಯರನ್ನು ಅಭಿನಂದಿಸಲಾಯಿತು.