ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚುನಾವಣೆಗಳೆಂದರೆ ಜನರಲ್ಲಿ ಹೆಂಡ, ಬಿರ್ಯಾನಿ, ಹಣ, ಸೀರೆ ಹಾಗೂ ಬೆಲೆಬಾಳುವ ಉಡುಗೊರೆಗಳಿಗೆಗೆ ಮಾರುವ ಸರಕಾಗಿದೆ. ಮತದಾನದ ಬಗ್ಗೆ ಅಸಹ್ಯಕರ ಭಾವನೆಯನ್ನು ಮೂಡುವಂತಾಗಿರುವುದು ಖಂಡನೀಯ. ಇಂತ ಶೋಚನೀಯ ಸ್ಥಿತಿಯಲ್ಲಿ ನಮ್ಮ ಡಾ.ನಾಗರಾಜ್ ರವರು ಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಪ್ರತಿನಿಧಿಸಲಿದ್ದಾರೆ ಎಂದರು.
ಇದರ ಭಾಗವಾಗಿ ದೇಶದ ಮತ್ತು ರಾಜ್ಯದ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಸಂಘ, ಹಾಗೂ ಸಂಘಟನೆಗಳು ಹೋರಾಟ ಮಾಡುತ್ತಿದ್ದು ಇಂತಹ ಸಮಯಕ್ಕೆ ಎದುರು ನೋಡುತ್ತಿದ್ದ ಅವರು ರಾಜ್ಯದ ಕೆ,ಆರ್.ಎಸ್. ಪಕ್ಷವು ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ, ಇದೇ ದೆಸೆಯಲ್ಲಿ ಕರ್ನಾಟಕದಲ್ಲಿ ಹಲಾವಾರು ಸ್ಥಳಗಳಲ್ಲಿ ಜಾಥಾ ಮಾಡುವ ಮೂಲಕ ಜನರಲ್ಲಿ ಭ್ರಷ್ಟಾಚಾರ ರಹಿತ ರಾಜಕೀಯ ಮತ್ತು ಮತದಾನದ ಅರಿವನ್ನು ಮೂಡಿಸಿ ಪಾರದರ್ಶಕ ಚುನಾವಣೆಯನ್ನು ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ನುಡಿದರು.ಸ್ವಚ್ಛ ಆಡಳಿತ, ಸ್ವಚ್ಛ ಮತದಾನಆಗ್ನೇಯ ಪದವೀದರ ಕ್ಷೇತ್ರದ ಅಭ್ಯರ್ಥಿ ಡಾ.ನಾಗರಾಜ್ ಮಾತನಾಡಿ, ಇಂದು ದೇಶ ಮತ್ತು ರಾಜ್ಯಅಭಿವೃದ್ಧಿಗೆ ಬಹಳ ಮಾರಕವಾದ ವಿಷಯವಾಗಿದೆ. ಅದ್ದರಿಂದ ಸರ್ವೋದಯ ಎಂಬ ಅಂಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ, ಮತ್ತು ಆಡಳಿತ ಇವುಗಳನ್ನು ಉನ್ನತಿಕರಿಸಿ ಉತ್ತಮ ಮಾರ್ಗದಲ್ಲಿ ನಡೆಯುವ ಹಾಗೆ ಸ್ವಚ್ಛ ಆಡಳಿತ ಬೇಕು ಎಂದರೆ ಸ್ವಚ್ಛ ಮತದಾನವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಯು ನ ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಡಿ.ಕೆ ಶ್ರೀನಿವಾಸ ಗೌಡ, ಕಲಾವತಿ, ಕೆ.ಆರ್. ರಂಗನಾಥ್, ಡಿ.ಜೆ.ಪ್ರಭು,ನಾರಾಯಸ್ವಾಮಿ ಗೌಡ, ಮಹೇಶ್ ಗೌಡ, ಮನೋಜ್ ಗೌಡ, ನಾರಾಯಣಸ್ವಾಮಿ, ಮೋತಿಲಾಲ್, ಫಿಜ ಸುಲ್ತಾನ, ಸುಮಾ, ಲಕ್ಷ್ಮೀ, ಮಲ್ಲಮ್ಮ, ಮಂಜುನಾಥ್ ಗೌಡ, ಮತ್ತಿತರರು ಇದ್ದರು.