ಉನ್ನತ ಮಟ್ಟಕ್ಕೇರಲು ಪರಿಶಮ ಅನಿವಾರ್ಯ: ಶಾಸಕ

KannadaprabhaNewsNetwork |  
Published : Sep 11, 2025, 12:03 AM IST
10ಕೆಆರ್ ಎಂಎನ್ 3.ಜೆಪಿಜಿರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ  ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ವಿದ್ಯೆ ಜ್ಞಾನದ ಸಂಪತ್ತಾಗಿದ್ದು, ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ ತರಬೇತಿ ಪಡೆದು ಉನ್ನತ ಸ್ಥಾನ ಅಲಂಕರಿಸಲು ನಿರಂತರ ಪರಿಶ್ರಮ ಹಾಕಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.

ರಾಮನಗರ: ವಿದ್ಯೆ ಜ್ಞಾನದ ಸಂಪತ್ತಾಗಿದ್ದು, ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ ತರಬೇತಿ ಪಡೆದು ಉನ್ನತ ಸ್ಥಾನ ಅಲಂಕರಿಸಲು ನಿರಂತರ ಪರಿಶ್ರಮ ಹಾಕಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ, ರಾಮನಗರ ನಗರಸಭೆ ವತಿಯಿಂದ ಬುಧವಾರ ನಡೆದ ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಸಿಇಟಿ, ನೀಟ್, ಜೆಇಇ ತರಬೇತಿ ನೀಡುತ್ತಿರುವ ನಗರಸಭೆಯ ಕಾರ್ಯ ಶ್ಲಾಘನೀಯ. ಪೋಷಕರು ಎಷ್ಟೇ ಬಡವರಿದ್ದರು ತಮ್ಮ ಮಕ್ಕಳಿಗೆ ಉತ್ತಮ ವ್ಯಾಸಂಗ ಕೊಡಿಸಿ ಸರ್ಕಾರಿ‌ ಉದ್ಯೋಗ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕೆಂಬ ಕನಸ್ಸು ಕಟ್ಟಿ ಕೊಂಡಿರುತ್ತಾರೆ. ಅದನ್ನು ಸಾಕಾರ‌ ಮಾಡಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ ಎಂದು ಹೇಳಿದರು‌.

ವಿದ್ಯಾರ್ಥಿ ಜೀವನದ ಅಮೃತ ಘಳಿಗೆಯಲ್ಲಿ ಸತತ ಪ್ರಯತ್ನ, ನಿರಂತರ ಓದಿನ ಅಭ್ಯಾಸ, ತರಬೇತಿಗಳನ್ನು ಪಡೆದುಕೊಂಡು ಉನ್ನತ ಪರೀಕ್ಷೆಗಳನ್ನು ಎದುರಿಸು ವಂತಾಗಿ ತಮ್ಮ‌ ಗುರಿ ಸಾಧಿಸುವ ಕೆಲಸವನ್ನು ಇಚ್ಚಾಶಕ್ತಿಯಿಂದ ಮಾಡಿ‌ ಯಶಸ್ಸು ಗಳಿಸಿ ಎಂದು ಕಿವಿ ಮಾತು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ಸವಾಲುಗಳು ನಿಮ್ಮ ಮುಂದಿದೆ. ದ್ವಿತೀಯ ಪಿಯುಸಿ ನಿಮ್ಮ‌ ಭವಿಷ್ಯ ರೂಪಿಸುವ ಮುಖ್ಯ ಘಟ್ಟ. ಇಲ್ಲಿಂದ ನಿಮ್ಮ ಓದಿನ ದಾರಿಯನ್ನು ಆಯ್ಕೆ ಮಾಡಿಕೊಂಡು ಆ ದಾರಿಯಲ್ಲಿ ಸಾಗುವ ಅವಕಾಶವಿದೆ. ತಾವುಗಳು ನಗರಸಭೆಯಿಂದ ನೀಡುತ್ತಿರುವ ಉಚಿತ ತರಬೇತಿಯ ಪ್ರಯೋಜನ‌ ಪಡೆದುಕೊಂಡು ಪೋಷಕರಿಗೆ ಹೆಸರು ತರುವ ಕೆಲಸ ಮಾಡಿ ಎಂದು ಇಕ್ಬಾಲ್ ಹುಸೇನ್ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭೆ ಬಜೆಟ್‌ನಲ್ಲಿ ಹೊಸ ಚಿಂತನೆ ಮಾಡಿ ತರಬೇತಿ ಆಯೋಜಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೀರೆರೆಯುವ ಕೆಲಸ ಮಾಡುತ್ತಿದ್ದೇವೆ. ವೇದಿಕೆಯ ಅತಿಥಿಗಳೆಲ್ಲರೂ ಉನ್ನತ ವಿದ್ಯಾಭ್ಯಾಸ ಮಾಡಿದವರು. ಇವರು ವಿದ್ಯಾರ್ಥಿಗಳಿಗೆ ಅವರ ಅನುಭವ ಹಂಚಿಕೊಂಡು ತಮಗೆ ಪ್ರೇರಣೆಯಾಗುವ ಉದ್ದೇಶದಲ್ಲಿ ಸಾಧನೆ ಮಾಡಿದವರನ್ನು ಅತಿಥಿಗಳಾಗಿ ಆಹ್ವಾನಿಸಿದ್ದೇವೆ ಎಂದರು.

ರಾಮನಗರ ನಗರಸಭೆ ವತಿಯಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಕೊಟ್ಟಿದ್ದು, ವಿದ್ಯಾರ್ಥಿಗಳ ನೆರವಿಗೆ ನಿಲ್ಲಲು ವಿನೂತನ ಪ್ರಯತ್ನವಾಗಿ ಉಚಿತ ತರಬೇತಿ ಆಯೋಜಿಸಿದ್ದೇವೆ ತಾವೆಲ್ಲರೂ ಯಶಸ್ಸು ಪಡೆದರೆ ನಮ್ಮ ಪ್ರಯತ್ನ ಹಾಗೂ ನಗರಸಭೆಯ ಉದ್ದೇಶ ಸಾರ್ಥಕವಾಗಲಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಕಾ ಅಕಾಡೆಮಿ ಉಪಯುಕ್ತ ಮಾಹಿತಿ ನೀಡಲಿದೆ. ತಮ್ಮ ಬುದ್ದಿಶಕ್ತಿಯನ್ನು ಬಳಸಿ ತರಬೇತಿಯನ್ನು ಸದ್ಭಳಕೆ ಮಾಡಿಕೊಂಡರೆ ತಾವು ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ದೇಶದ ಬಂಡವಾಳವನ್ನು ಶಿಕ್ಷಣ, ಆರೋಗ್ಯ ಕ್ಷೇತ್ರದ ಮೇಲೆ ಹೂಡ ಬೇಕಾಗಿದೆ. ಶಿಕ್ಷಣ ಎಂದರೆ ಜ್ಞಾನವಾಗಿದ್ದು, ವಿದ್ಯಾರ್ಥಿಗಳಲ್ಲಿ ತಾಳ್ಮೆ, ಸಂಯಮ, ಶಿಸ್ತು, ಬದ್ದತೆ ಇದ್ದರಷ್ಟೆ ತಮ್ಮ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಉಜ್ವಲ ಶಿಕ್ಷಣಕ್ಕೆ ಪೂರಕವಾಗಿ ವಿಜ್ಞಾನ ವಿದ್ಯಾರ್ಥಿಗಳಿಗೆ ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಕ್ಕಿದೆ. 8 ತಿಂಗಳ ಅವಧಿಯ ತರಬೇತಿಗೆ ಅಕ್ಕಾ ಅಕಾಡೆಮಿ ಮತ್ತು ನಗರಸಭೆ ಒಪ್ಪಂದ ಮಾಡಿಕೊಂಡಿದೆ. ರಾಮನಗರದ ವಿದ್ಯಾರ್ಥಿ ಗಳು ಉತ್ತಮ ಸಾಧನೆ ಮಾಡಿದರೆ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗಲಿದೆ ಎಂದರು‌

ಅಕ್ಕಾ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ನಗರಸಭೆ ವತಿಯಿಂದ ಮಾಡುತ್ತಿರುವ ಹೊಸ ಪ್ರಯೋಗವಾಗಿದೆ. ಎಲ್ಲ ವಿಷಯಗಳ ಪ್ರವೇಶ ಪರೀಕ್ಷೆಗಳಿವೆ. ಸೆ.14 ರಿಂದ ತರಬೇತಿ ಆರಂಭವಾಗಲಿದ್ದು, ಸರ್ಕಾರಿ ಶಾಲೆಯಲ್ಲಿ ಓದುವ ಬಡ ವಿಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಪಡೆಯಲು ಖರ್ಚು ಹೆಚ್ಚಾಗಲಿದ್ದು, ಅದನ್ನು ಗಮನಿಸಿ ನಗರಸಭೆ ವತಿಯಿಂದ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಅಣಿಗೊಳಿಸುವು ದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಯೋಜನಾ ನಿರ್ದೇಶಕ ಜಿ.ಡಿ.ಶೇಖರ್ ಮಾತನಾಡಿದರು. ಪ್ರಾಂಶುಪಾಲರ‌ ಸಂಘದ ಅಧ್ಯಕ್ಷ‌ ಜಿ.ಶಿವಣ್ಣ, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ‌ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಅಜ್ಮತ್ , ಸೋಮಶೇಖರ್, ಆರೀಫ್ , ಪವಿತ್ರ, ಮಂಜುನಾಥ್, ಗಿರಿಜಮ್ಮ, ರಮೇಶ್, ಜಯಲಕ್ಷ್ಮಮ್ಮ, ಪದ್ಮಾ, ಮಹಾಲಕ್ಷ್ಮಿ, ವಿಜಯಕುಮಾರಿ, ಮಂಜುಳಾ, ಖುರೇಷಿ, ಗಿರಿಜಮ್ಮ, ನಿಜಾಂ ಷರೀಫ್ , ಬೈರೇಗೌಡ, ಆಯಿಷಾ ಖಾನಂ, ಸಮದ್, ಅಣ್ಣು, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.

10ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!