ವೈದ್ಯರಿಗೆ ಸವಾಲಾಗಿ ಕಾಡಿದ ಕೋವಿಡ್

KannadaprabhaNewsNetwork |  
Published : Jul 09, 2024, 12:49 AM IST
7ಡಿಡಬ್ಲೂಡಿ6ಸುಮಾರು 25 ವರ್ಷಗಳಿಗಿಂತಲೂ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ವೈದ್ಯರನ್ನು ಸನ್ಮಾನಿಸುವ ಮೂಲಕ ಭಾರತೀಯ ವೈದ್ಯಕೀಯ ಸಂಸ್ಥೆಯ ವತಿಯಿಂದ ವಿಶೇಷವಾಗಿ ವೈದ್ಯರ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಉನ್ನತ ನೈತಿಕತೆಯನ್ನು ಕಾಪಾಡಿಕೊಳ್ಳಲು ಮತ್ತು ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆಯನ್ನು ನೀಡಲು ಯುವ ವೈದ್ಯರು ಮುಂದಾಗಬೇಕು.

ಧಾರವಾಡ:

ಸುಮಾರು 25 ವರ್ಷಗಳಿಗಿಂತಲೂ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ವೈದ್ಯರನ್ನು ಸನ್ಮಾನಿಸುವ ಮೂಲಕ ಭಾರತೀಯ ವೈದ್ಯಕೀಯ ಸಂಸ್ಥೆಯ ವತಿಯಿಂದ ವಿಶೇಷವಾಗಿ ವೈದ್ಯರ ದಿನಾಚರಣೆ ಆಚರಿಸಲಾಯಿತು.

ಭಾರತೀಯ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ. ಸತೀಶ ಇರಕಲ್, ತಮ್ಮ ಗುಣಪಡಿಸುವ ಸ್ಪರ್ಶದಿಂದ ರೋಗಿಗಳನ್ನು ಗುಣಪಡಿಸುವ ಎಲ್ಲ ವೈದ್ಯರ ಪ್ರಾಮಾಣಿಕತೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಈ ಸಂದರ್ಭದಲ್ಲಿ ಶ್ಲಾಘಿಸಲೇಬೇಕು. ಈ ಯುಗದಲ್ಲಿ ಯಾವುದೇ ವೈದ್ಯರಿಗೆ ಅತ್ಯಂತ ಸವಾಲಾಗಿ ಕಾಡಿದ್ದು ಕೋವಿಡ್ ಸಮಯ. ತಮ್ಮ ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಕುಟುಂಬ ಜೀವನವನ್ನು ತ್ಯಾಗ ಮಾಡಿದ ಎಲ್ಲ ವೈದ್ಯರು ಮಾನವಕುಲವನ್ನು ಉಳಿಸಲು ಹಗಲಿರುಳು ಶ್ರಮಿಸಿದರು ಎಂದರು.

ಡಾ. ಬಿ.ಸಿ. ರಾಯ್‌ ಅವರ ಗೌರವಾರ್ಥವಾಗಿ ಪ್ರತಿವರ್ಷ ಜುಲೈ 1ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮಾನವೀಯತೆಗೆ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿದ ಎಲ್ಲರ ಸೇವೆಗಳನ್ನು ಗುರುತಿಸಿದ ಧಾರವಾಡದ ಹಿರಿಯ ವೈದ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.ಡಾ. ಬಿ.ಸಿ. ವಸ್ತ್ರದ, ಡಾ. ನವೀನ್ ಮಂಕಣಿ, ಡಾ. ಸಂತೋಷ್ ಜೀವಣ್ಣವರ, ಡಾ. ಸಂದೀಪ್ ಪ್ರಭು, ಡಾ. ಅಕ್ತರ ಜಹಾನ್, ಡಾ. ವಂದನಾ ಗ್ರಾಮಪುರೋಹಿತ, ಡಾ. ಬೀನಾ ಕುಲಕರ್ಣಿ, ದ್ರೀನಾ ಕುಲ್ಡಯ್. ಡಾ. ರವಿಕುಮಾರ್ ಜಾಧವ್, ಡಾ. ಕವಿತಾ ಜಾಧವ್ ಅವರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ವೈದ್ಯರಾದ ಡಾ. ರಾಜನ್ ದೇಶಪಾಂಡೆ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಉನ್ನತ ನೈತಿಕತೆಯನ್ನು ಕಾಪಾಡಿಕೊಳ್ಳಲು ಮತ್ತು ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆಯನ್ನು ನೀಡಲು ಯುವ ವೈದ್ಯರಿಗೆ ಮನವಿ ಮಾಡಿದರು. ರೋಗಿಗಳು ಮತ್ತು ಅವರ ಸಂಬಂಧಿಕರು ವೈದ್ಯರಲ್ಲಿ ನಂಬಿಕೆ ಇಡಬೇಕು ಮತ್ತು ಉತ್ತಮ ಆರೈಕೆಯನ್ನು ಪಡೆದುಕೊಳ್ಳಬೇಕು ಎಂದರು.

ನ್ಯಾಯವಾದಿ ವೀರೇಶ ಬೂದಿಹಾಳ ಮಾತನಾಡಿದರು. ಕರ್ನಾಟಕ ವೈದ್ಯಕೀಯ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಡಾ. ಸುಧೀರ ಜಂಬಗಿ, ಅತ್ಯುತ್ತಮ ಆರೋಗ್ಯ ವೃತ್ತಿಪರ ಪ್ರಶಸ್ತಿ ಪಡೆದ ಡಾ. ಬೀನಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಮಟ್ಟದ ಡಾಕ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್‌ ಆದ ಡಾ. ಅರವಿಂದ್ ಯೆರಿ, ಹಿರಿಯ ವೈದ್ಯರಾದ ಡಾ. ವೈ.ಎನ್. ಇರಕಲ್, ಡಾ. ಆರ್.ಜಿ. ಪುರಾಣಿಕ್, ಡಾ. ಹಂದಿಗೋಳ್, ಡಾ. ನಾಡಕರ್ಣಿ, ಡಾ. ಹುಕ್ಕೇರಿ, ಡಾ. ಪೈ, ಡಾ. ಸಾಂಬ್ರಾಣಿ, ಡಾ. ಕವಿತಾ ಮಂಕಣಿ, ಡಾ. ವಾಣಿ ಇರಕಲ್‌, ಡಾ. ಸುಹಾಸ ಹಂಚಿನಮನಿ ಇದ್ದರು. ಡಾ. ಉಮಾ ಸುಲ್ತಾನಪುರಿ, ಡಾ. ಸಂತೋಷಿ ದರ್ಗಾಡ್ ನಿರೂಪಿಸಿದರು. ಡಾ.ಕಿರಣ್ ಕುಲಕರ್ಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ