- ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಗೆಲ್ಲಿಸಲು ಡಾ.ಸಿದ್ದನಗೌಡ ಪಾಟೀಲ್ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತದಾನದ ಹಕ್ಕು ಉಳಿಸಿಕೊಳ್ಳಲು ನಾವು ಚುನಾವಣೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಯೇ ಎಂಬ ಪದ್ಧತಿಯೇ ಇಲ್ಲವಾಗುತ್ತದೆ . ಚುನಾವಣೆಯು ದೇಶದ ಪ್ರಜಾಪ್ರಭುತ್ವದಡಿ ನಡೆಯುತ್ತದೆ. ಒಂದು ವೇಳೆ ಚುನಾವಣೆ ಇಲ್ಲವೆಂದರೆ ನಾವು ಮುಂದಿನ ದಿನಗಳನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಒಂದು ದೇಶ ಒಬ್ಬ ನಾಯಕ ಎಂಬ ಪರಿಸ್ಥಿತಿ ಎದುರಾಗಿ, ಹಿಟ್ಲರ್ ಆಡಳಿತ ಬರಲಿದೆ. ಒಂದುವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾರ್ಲಿಮೆಂಟ್ ಕಾಯುವ ಬದಲು ಕಾರ್ಪೋರೇಟ್ ಕಂಪನಿಗಳನ್ನು ಕಾಯಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೇ, ದೇಶದ ಬಹುತ್ವ ಒಡೆದು ಹಾಕಿ, ಏಕವ್ಯಕ್ತಿ ಆಡಳಿತ ಬರಲಿದೆ. ಅಲ್ಲದೇ, ವಿಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ದೂರಿದರು.ಚುನಾವಣೆಯಲ್ಲಿ ಹೇಳಿಕೊಳ್ಳಲು ಯಾವುದೇ ವಿಷಯ ಇಲ್ಲದ ಕಾರಣಕ್ಕೆ ದೇವಸ್ಥಾನದಲ್ಲಿ ಇರಬೇಕಾದ ಶ್ರೀರಾಮನನ್ನು ಬೀದಿಗೆ ತಂದಿದ್ದಾರೆ. ಲೋಕಸಭೆಯಲ್ಲಿ ಇರಬೇಕಾದ ಮೋದಿ ದೇವಸ್ಥಾನಗಳಲ್ಲಿ ಕುಳಿತು ಭಜನೆ ಮಾಡುತ್ತಿದ್ದಾರೆ. ರೈತವಿರೋಧಿ, ಕೃಷಿವಿರೋಧಿ, ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದು, ದೇಶದ ಕಾರ್ಮಿಕರು, ರೈತರ ಬದುಕನ್ನೇ ನಾಶ ಮಾಡುತ್ತಿದ್ದಾರೆ. ಆಡಳಿತ ವಿರೋಧಿ ಅಭಿಪ್ರಾಯಗಳು ಪ್ರಸಾರವಾಗದಂತೆ ತಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಿಪಿಐ ಜಿಲ್ಲಾ ಮುಖಂಡರಾದ ಆನಂದರಾಜ, ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ಚಂದ್ರು, ವಿ.ಲಕ್ಷ್ಮಣ, ಟಿ.ಎಸ್.ನಾಗರಾಜ, ಎಂ.ಬಿ.ಶಾರದಮ್ಮ ಇತರರು ಇದ್ದರು.
- - - -16ಕೆಡಿವಿಜಿ2:ದಾವಣಗೆರೆಯಲ್ಲಿ ಮಂಗಳವಾರ ಸಿಪಿಐ ರಾಜ್ಯ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.