ಹೊಸದುರ್ಗ: ಸ್ವಯಂ ಉದ್ಯೋಗ ತರಬೇತಿಗಳ ಸದ್ಭಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುವಲ್ಲಿ ಮಹಿಳೆಯರು ಮುಂದೆ ಬನ್ನಿ ಎಂದು ಐಡಿಎಲ್ ಫೌಂಡೆಷನ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈನಿ ಗ್ರೇಸ್ ಪಾಲ್ ಮಹಿಳೆಯರಿಗೆ ಕರೆ ನೀಡಿದರು.
ರಾಣೆಬೆನ್ನೂರಿನ ಸಾಹಿತಿ ಲಕ್ಷ್ಮಿ ಎನ್.ಅಡಕಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಇದ್ದು, ಜೀವನದಲ್ಲಿ ಜಿಗುಪ್ಸೆಗೊಂಡಿರುವ ಮಹಿಳೆಯರು ಸಮಾಜದಲ್ಲಿ ಅಸ್ತಿತ್ವ ಬಿಟ್ಟು ಹೋಗಬೇಕಾದರೆ, ಸಮಾಜಕ್ಕೆ ನಾವುಗಳೇ ಕೊಡುಗೆಯಾಗಬೇಕು. ಮಹಿಳೆಯರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಇಂತಹ ಸಂಸ್ಥೆಗಳನ್ನು ಅಪ್ಪಿಕೊಂಡಾಗ ಮಾತ್ರ ಯಶಸ್ಸಿನತ್ತ ಸಾಗಬಹುದು ಎಂದು ತಿಳಿಸಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಟ್ರಸ್ಟಿ ಉಮಾ ಕುಮಾರ್ ಬ್ಯೂಟಿಷಿಯನ್ ಶಶಿಕಲಾ, ಕೆ.ಶ್ವೇತಾ, ನಾಗರತ್ನ, ಸುಮಾಯಾ ಭಾನು, ಶಶಿಕಲಾ ಇನ್ನೂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅನುರಾಧ ಪ್ರಾರ್ಥಿಸಿ, ಸಂಚಿತ ಸ್ವಾಗತಿಸಿ ಎಚ್.ಗಾಯಿತ್ರಿ ವಂದಿಸಿ ಸಾನಿಯಾ ಕಾರ್ಯಕ್ರಮ ನಿರೂಪಿಸಿದರು.