ಕುಕನೂರು:
ತಾಲೂಕಿನ ಬಿನ್ನಾಳದಲ್ಲಿ ಜಯದೇವ ಗಜಾನನ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನೆ ಪ್ರಯುಕ್ತವಾಗಿ ಜರುಗಿದ ಜನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಸಾವಿರ ದೇವರ ಪೂಜಿಸುವ ಮೊದಲು ವಿಘ್ನ ವಿನಾಯಕನನ್ನು ಪೂಜಿಸುವುದು ಭಾರತೀಯರ ಸಂಪ್ರದಾಯ. ಯುವಕರು ಗಣೇಶ ಪ್ರತ್ರಿಷ್ಠಾಪನೆ ಮಾಡುವುದಷ್ಟೇ ಅಲ್ಲದೆ ಆ ಮೂಲಕ ಜನಪದ ಕಂಪು ಪಸರಿಸುವ ಕೆಲಸ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಜನಪದ ನೀಡಿದಂತೆ ಆಗುತ್ತದೆ ಎಂದರು.
ಭಾರತೀಯ ಜನಪದ ಕಂಪು ಬಹಳ ಇಂಪಾಗಿದೆ. ಜೀವನದಲ್ಲಿ ದೇವರನ್ನು ಕಾಣಬೇಕು ಎನ್ನುವವರು ನೂರಾರು ಮೈಲಿ ತೀರ್ಥಯಾತ್ರೆ ಮಾಡುವುದು ಬೇಡ. ಪಾಪ ಕಳೆಯಲೆಂದು ಸಾವಿರ ಬಾರಿ ಗಂಗಾಸ್ನಾನ ಮಾಡುವುದು ಬೇಡ. ತಂದೆ-ತಾಯಿಗೆ ಪ್ರತಿದಿನ ಬೆಳಗ್ಗೆ ಒಂದು ಬಾರಿ ಪ್ರದಕ್ಷಿಣೆ ಹಾಕಿದರೆ ಸಾಕು, ಎಲ್ಲ ಭಾಗ್ಯಗಳು ನಿಮ್ಮದಾಗುತ್ತವೆ ಎಂದು ಹೇಳಿದರು.ಪತ್ರಕರ್ತ ಜಗದೀಶ್ ಚಟ್ಟಿ ಮಾತನಾಡಿ, ಕಲಾವಿದರ ತವರೂರು ಎಂದು ಕರೆಯಲ್ಪಡುವ ಬಿನ್ನಾಳದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರನ್ನು ಆಹ್ವಾನಿಸಿ, ಕಲೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ ಎಂದರು.
ಈ ವೇಳೆ ಸಿದ್ದಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ತಹಸೀಲ್ದಾರ್, ಸದಸ್ಯರಾದ ಕಮಲಾಕ್ಷಿ ಕಂಬಳಿ, ಚನ್ನಮ್ಮ ಮುತ್ತಾಳ, ಮಹಮದಾಸಾಬ್ ಉಮಚಗಿ, ಲಕ್ಷ್ಮಣ ಚಲವಾದಿ, ಗೂರಪ್ಪ ಪಂತರ, ಬಸವರಾಜ ಭಜಂತ್ರಿ, ಬಸವರಾಜ ಮೆಣಸಿನಕಾಯಿ, ಸಂತೋಷ ಮೆಣಸಿನಕಾಯಿ, ಮಹಮ್ಮದ್ ಗೌಸ್ ಇದ್ದರು.