- ವಾರದೊಳಗೆ ಸ್ಪಂದಿಸದಿದ್ದರೆ ಪ್ರತಿಭಟನೆ: ಡಿಎಸ್ಎಸ್, ಪರಿಸರ ಸಂರಕ್ಷಣಾ ವೇದಿಕೆ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕಿನ ಹರ್ಲಾಪುರ, ಗುತ್ತೂರು, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ಹಲಸಬಾಳು, ರಾಜನಹಳ್ಳಿ, ತಿಮ್ಲಾಪುರ, ಧೂಳೆಹೊಳೆ, ಇಂಗಳಗೊಂದಿ ಮತ್ತಿತರ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಿರಂತರ ನಡೆದಿದೆ ಎಂದು ದೂರಿದರು.
ತುಂಗಭದ್ರಾ ನದಿ ದಂಡೆಯ ಗ್ರಾಮಗಳಲ್ಲಿ 15-20 ಅಡಿ ಆಳದವರೆಗೆ ಜೆಸಿಬಿ, ಹಿಟಾಚಿ ಯಂತ್ರಗಳಿಂದ ಗುಂಡಿ ತೋಡಿಸಿ, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಪರಿಸರ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಣ್ಣು ಗಣಿಗಾರಿಕೆಯಿಂದಾಗಿ ನದಿ ದಂಡೆಯ ಹಲವು ಗ್ರಾಮಗಳ ಸಾರ್ವಜನಿಕ ಬಂಡಿ ರಸ್ತೆ, ಕಾಲುದಾರಿಗಳೇ ಕಣ್ಮರೆಯಾಗಿವೆ ಎಂದು ಆರೋಪಿಸಿದರು.ನದಿತಟದ ಗ್ರಾಮಗಳ ರೈತರು, ಜನಸಾಮಾನ್ಯರು ದನ- ಕರುಗಳಿಗೆ ಮೈತೊಳೆಯಲು, ಬಟ್ಟೆ ತೊಳೆಯಲು, ಹಬ್ಬದ ದಿನಗಳಲ್ಲಿ ಗಂಗಾಪೂಜೆ ಮಾಡಲು ನದಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ನದಿ ದಂಡೆಯ ಗ್ರಾಮಗಳ ಹಿಂದು- ಮುಸ್ಲಿಂ ಸಮುದಾಯಗಳ ರುದ್ರಭೂಮಿ, ಖಬರಸ್ಥಾನಗಳಲ್ಲಿ ಕೆಲವು ನಾಶವಾಗಿದ್ದರೆ, ಮತ್ತೆ ಕೆಲವು ಕಣ್ಮರೆಯಾಗುವ ಪರಿಸ್ಥಿತಿ ಮಣ್ಣು ಗಣಿಗಾರಿಕೆ ತಂದೊಡ್ಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತುಂಗಭದ್ರಾ ದಂಡೆಯ ಸಾಧು ಸಿದ್ದಪ್ಪಜ್ಜನ ಮಠ, ಗುತ್ತೂರು ಗ್ರಾಮ ದೇವತೆ ಶ್ರೀ ಉಡಿಸಲಮ್ಮ ದೇವಿಯ ಮೂಲ ದೇವಾಲಯ ಅಳಿವಿನಂಚಿನಲ್ಲಿದೆ. ಹರಿಹರ ತಾಲೂಕಿನ ಹತ್ತಾರು ಗ್ರಾಮಗಳ ಸ್ಥಿತಿ ಇದೇ ರೀತಿ ಆಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಕೃಷಿ ಇಲಾಖೆ ಅನುಮತಿ ಪಡೆದು, ಏರಿ ಅಥವಾ ಕಲ್ಲುಗಳಿದ್ದರೆ 3 ಅಡಿ ಮಾತ್ರ ಜಮೀನು ಸಮತಟ್ಟ ಮಾಡಲು ಅವಕಾಶವಿದೆ. 3 ಅಡಿಗಿಂತ ಹೆಚ್ಚು ಮಣ್ಣು ತೆಗೆಸಿದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ಭೂ ಕಂದಾಯ ಕಾಯ್ದೆ ಅನ್ವಯ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದೆ. ಆದರೂ, ತಾಲೂಕು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿವೆ ಎಂದು ಕುಂದುವಾಡ ಮಂಜುನಾಥ ಆರೋಪಿಸಿದರು.
ಡಿಎಸ್ಎಸ್ ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ, ಕೆ.ಪಿ. ಗೋಪಿನಾಥಾಚಾರ್, ಸುನೀಲ ಹೊಟ್ಟಿಗೇನಹಳ್ಳಿ, ಮಂಜುನಾಥ ಹಾಲವರ್ತಿ, ಶಿವಶಂಕರ ಇತರರು ಇದ್ದರು.
ಟಾಪ್ ಕೋಟ್
- ಗಿರೀಶ ದೇವರಮನಿ, ಅಧ್ಯಕ್ಷ, ಪರಿಸರ ರಕ್ಷಣಾ ವೇದಿಕೆ