ಬುರುಡೆ ಷಡ್ಯಂತ್ರಕ್ಕೆ ಉಜಿರೆ ಹೋಟೆಲ್‌ನಲ್ಲಿ ಪ್ಲ್ಯಾನ್‌?

Published : Sep 08, 2025, 09:37 AM IST
Dharmasthala Burude Gang

ಸಾರಾಂಶ

ಧರ್ಮಸ್ಥಳ ಬುರುಡೆ ಗ್ಯಾಂಗ್‌ ಉಜಿರೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸಿತ್ತು ಎಂಬುದು ತನಿಖೆ ವೇಳೆ ಎಸ್‌ಐಟಿಗೆ ತಿಳಿದು ಬಂದಿದೆ.

  ಮಂಗಳೂರು :  ಧರ್ಮಸ್ಥಳ ಬುರುಡೆ ಗ್ಯಾಂಗ್‌ ಉಜಿರೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸಿತ್ತು ಎಂಬುದು ತನಿಖೆ ವೇಳೆ ಎಸ್‌ಐಟಿಗೆ ತಿಳಿದು ಬಂದಿದೆ.

ಗಿರೀಶ್ ಮಟ್ಟಣ್ಣವರ್‌, ಚಿನ್ನಯ್ಯ ಹಾಗೂ ವಿಠಲ ಗೌಡ ಈ ಹೋಟೆಲ್‌ನಲ್ಲಿ ಸಭೆ ನಡೆಸಿದ್ದರು. ಅಲ್ಲೇ ಕೆಲವು ಪ್ಲ್ಯಾನ್ ರೂಪಿಸಿ, ಬುರುಡೆ ತಂಡ ಕಥೆ ಹೆಣೆದಿತ್ತು. ಆ ಬಳಿಕದ ಕಥೆಯಲ್ಲಿ ವಿಠಲ ಗೌಡ ಕಾಣಿಸಿಕೊಳ್ಳದೆ ಮರೆಯಾಗಿದ್ದ. ಆದರೂ ಮಟ್ಟಣ್ಣವರ್, ಜಯಂತ್ ಅವರು ಚಿನ್ನಯ್ಯ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಎಸ್ಐಟಿ ವಿಚಾರಣೆ ವೇಳೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಬುರುಡೆ ತಂದುಕೊಟ್ಟ ಬಳಿಕ ಕಥೆಯಿಂದ ಹೊರಗಿದ್ದಂತೆ ನಟಿಸಿದ್ದ ವಿಠಲ ಗೌಡನನ್ನೂ ಅಧಿಕಾರಿಗಳು ಪ್ರಶ್ನಿಸಿದಾಗ ಬುರುಡೆ ರಹಸ್ಯ ಬಯಲಿಗೆ ಬಂತು ಎಂದು ತಿಳಿದುಬಂದಿದೆ.

ಕಣ್ಣೀರಿಡುತ್ತಲೇ ಜೈಲಿಗೆ ಹೋದ ಬುರುಡೆ ಚಿನ್ನಯ್ಯ 

ಶಿವಮೊಗ್ಗ/ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಶನಿವಾರ ತಡರಾತ್ರಿ ಶಿವಮೊಗ್ಗ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಭದ್ರತೆ ದೃಷ್ಟಿಯಿಂದ ತಡರಾತ್ರಿ 1.20ಕ್ಕೆ ಶಿವಮೊಗ್ಗದ ಜೈಲಿಗೆ ಕರೆತರಲಾಯಿತು. ಆತನಿಗೆ ವಿಚಾರಣಾಧೀನ ಕೈದಿಯಾಗಿ 1104/ 25 ಸಂಖ್ಯೆ ನೀಡಲಾಗಿದೆ. ಜೈಲಿಗೆ ತೆರಳುವಾಗ ಚಿನ್ನಯ್ಯ ಕಣ್ಣೀರು ಹಾಕಿದ್ದು, ತಾನು ತಪ್ಪು ಮಾಡಿದ್ದಾಗಿ ಪಶ್ತಾತಾಪ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಆತನಿಗೆ ಜಾಮೀನು ಕೋರಿ ಆತನ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೆ.9ರಂದು ಅರ್ಜಿ ವಿಚಾರಣೆಗೆ ಬರಲಿದೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಅಭಿವೃದ್ಧಿ ಕಾರ್‍ಯಗಳಿಗೆ ಸ್ಥಳೀಯರ ಸಹಕಾರ ಅಗತ್ಯ: ಹರೀಶ್‌ ಪೂಂಜ
ದಿ.ಡಾ.ಎಚ್.ಟಿ. ಮನೋರಮಾ ರಾವ್ ಸ್ಮಾರಕ ದತ್ತಿ ಉಪನ್ಯಾಸ