ಕನ್ನಡಪ್ರಭ ವಾರ್ತೆ ನಾಗಮಂಗಲ/ದೇವಲಾಪುರ
ಗಿಡದ ಜಾತ್ರೆಯು ಪ್ರತಿವರ್ಷ ಡಿಸೆಂಬರ್ ತಿಂಗಳ ಮೊದಲ ಅಥವಾ ಕೊನೇ ವಾರದಲ್ಲಿ ಜರುಗುತ್ತದೆ. ಈ ಬಾರಿ ಡಿ.13ರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಲಿದೆ. ಒಂದೇ ದಿನ ನಡೆದರೂ ಅತಿದೊಡ್ಡ ಗಿಡದ ಜಾತ್ರೆಗೆ ಸಾವಿರಾರು ಹರಿಭಕ್ತರು ಇತಿಹಾಸ ಪರಂಪರೆ ಹೊಂದಿರುವ ಜಾತ್ರೆ ಆಚರಿಸುತ್ತಾ ಬಂದಿದ್ದಾರೆ.
ವೆಂಕಟೇಶ್ವರಸ್ವಾಮಿ ಭಕ್ತಾದಿಗಳು ಶ್ರೀಕ್ಷೇತ್ರ ತಿರುಪತಿಗೆ ಹೋಗದವರು ಗಿಡದ ಜಾತ್ರೆಗೆ ಹೋಗಿ ದಾಸಪ್ಪರಿಗೆ ಪೂಜೆ ಸಲ್ಲಿಸುವ ಮುಖಾಂತರ ಹರಕೆ ಇತ್ಯಾದಿಗಳನ್ನು ನೀಡುತ್ತಾರೆ. ಈ ದೇಗುಲವನ್ನು ಎರಡನೇ ತಿರುಪತಿ ಎಂದೆ ಜಿಲ್ಲಾದ್ಯಂತ ಪ್ರಸಿದ್ಧಿ ಪಡೆದಿದೆ.ಜಾತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಜಾತ್ರೆಯಲ್ಲಿ ಅಂಗಡಿಗಳನ್ನು ತೆರೆದು ರೈತರಿಗೆ ಬೇಕಾಗುವ ಒಕ್ಕಣೆಯ ಸಾಮಗ್ರಿಗಳು, ತಿಂಡಿ ತಿನಿಸುಗಳು, ಜವನ ಬಾಳೆಹಣ್ಣು ಮಾರಾಟ ಮಾಡಲಾಗುತ್ತಿದೆ. ಈ ಜಾತ್ರೆಯು ಕಾಡಿನ ಮಧ್ಯ ನಡೆದರೂ ಗೋವಿಂದನ ಘೋಷ ಶಂಕು ಜಗಟೆಯ ನೀನಾದ ಜೋರಾಗಿರುತ್ತದೆ.
ತಿರುಪತಿಗೆ ಹೋಗಲು ಸಾಧ್ಯವಾಗದವರು ಈ ಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಇದಕ್ಕೆ ಚಿಕ್ಕ ತಿರುಪತಿ ಎಂಬ ಹೆಸರು ಬಂದಿದೆ. ಕೆರೆ ದಂಡೆಯ ಗಿಡದ ಕೆಳಗೆ ದೇವರಿಗೆ ಎಡೆ ಇಟ್ಟು ಪೂಜಿಸುವುದರಿಂದ ಗಿಡದ ಜಾತ್ರೆಯಾಗಿ ಜನವಲಯದಲ್ಲಿ ಉಳಿದು ಬಂದಿದೆ.
ಬೆಟ್ಟದ ಗುಡಿ ಮೇಲೆ ಜಾತ್ರೆ ಸಂಭ್ರಮ: